ನವದೆಹಲಿ: ಆಷಾಢ ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಗವಾನ್ ಬುದ್ಧನ ಶಾಂತಿ ಮತ್ತು ನ್ಯಾಯದ ಬೋಧನೆಗಳನ್ನು ಎತ್ತಿ ತೋರಿಸುವ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ.
ಆಷಾಢ ಪೂರ್ಣಿಮೆಯ ಅಂಗವಾಗಿ ಶುಭಾಶಯಗಳನ್ನು ಕೋರಿದ ಮೋದಿ “ಆಷಾಢ ಪೂರ್ಣಿಮೆಯನ್ನು ಗುರು ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ನಮಗೆ ಜ್ಞಾನವನ್ನು ನೀಡಿದ ನಮ್ಮ ಗುರುಗಳನ್ನು ಸ್ಮರಿಸುವ ದಿನ ಇದು. ಈ ಪ್ರೇರಣೆಯೊಂದಿಗೆ ನಾವು ಭಗವಾನ್ ಬುದ್ಧನಿಗೆ ಗೌರವ ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ.
ಭಗವಾನ್ ಬುದ್ಧನ ಬೋಧನೆಗಳನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ಬೌದ್ಧಧರ್ಮವು ಜನರಿಗೆ, ಬಡವರಿಗೆ, ಮಹಿಳೆಯರಿಗೆ ಗೌರವ, ಶಾಂತಿ ಮತ್ತು ಅಹಿಂಸೆಯ ಬಗ್ಗೆ ಆದರವನ್ನು ಕಲಿಸುತ್ತದೆ ಎಂದು ಹೇಳಿದರು.
“ಭಗವಾನ್ ಬುದ್ಧನ ಎಂಟು ಪಥಗಳು ಹಲವು ರಾಷ್ಟ್ರಗಳ ಮತ್ತು ಸಮಾಜಗಳ ಯೋಗಕ್ಷೇಮದ ಕಡೆಗೆ ದಾರಿ ತೋರಿಸುತ್ತವೆ. ಸಹಾನುಭೂತಿ ಮತ್ತು ದಯೆಯ ಮಹತ್ವವನ್ನು ಇದು ಸಾರಿ ಹೇಳುತ್ತದೆ.ಭಗವಾನ್ ಬುದ್ಧನ ಬೋಧನೆಗಳು ಚಿಂತನೆ ಮತ್ತು ಕ್ರಿಯೆಯಲ್ಲಿ ಸರಳತೆಯನ್ನು ಪ್ರತಿಪಾದಿಸುತ್ತದೆ. ಬೌದ್ಧಧರ್ಮದ ಬೋಧನೆಗಳು ಸುಸ್ಥಿರ ಭೂಮಿಗೆ ಸಾಧನಗಳಾಗಿವೆ.ಭಗವಾನ್ ಬುದ್ಧ ಎರಡು ವಿಷಯಗಳ ಕುರಿತು ಮಾತನಾಡಿದ್ದಾರೆ. ಅದೆಂದರೆ ಭರವಸೆ ಮತ್ತು ಉದ್ದೇಶ. ಇವುಗಳ ನಡುವೆ ಅವರು ಬಲವಾದ ಬೆಸುಗೆಯನ್ನು ಕಂಡರು. ಭರವಸೆಯಿಂದ ಉದ್ದೇಶದ ಪ್ರೇರಣೆ ಸಿಗುತ್ತದೆ” ಎಂದಿದ್ದಾರೆ.
ಕುಶಿನಗರ ವಿಮಾನ ನಿಲ್ದಾಣ ನವೀಕರಣದ ಘೋಷಣೆಯ ಬಗ್ಗೆ ಮಾತನಾಡಿದ ಅವರು, ಇದು ಅನೇಕ ಜನರು, ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಕುಶಿನಗರಲ್ಲಿ ಕರೆ ತರುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಈ ಕಠಿಣ ದಿನಗಳಲ್ಲಿ ಜಗತ್ತು ಎದುರಿಸುತ್ತಿರುವ ಸವಾಲುಗಳಿಗೆ ಭಗವಾನ್ ಬುದ್ಧನ ಆದರ್ಶಗಳಿಂದ ಪರಿಹಾರಗಳಾಗಿ ಬರಬಹುದು ಎಂದು ಮೋದಿ ಹೇಳಿದರು.
ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬುದ್ಧ ಮತ್ತು ಅವರ ಬೋಧನೆಗಳಿಂದ ಪ್ರೇರಣೆ ಪಡೆಯಲು ಯುವಕರಿಗೆ ಅವರು ಸಂದೇಶ ನೀಡಿದರು. “ನನ್ನ ಯುವ ಸ್ನೇಹಿತರನ್ನು, ಭಗವಾನ್ ಬುದ್ಧನ ಆಲೋಚನೆಗಳೊಂದಿಗೆ ಸಂಪರ್ಕದಲ್ಲಿರಲು ನಾನು ಒತ್ತಾಯಿಸುತ್ತೇನೆ. ಬುದ್ಧ ಪ್ರೇರೇಪಿಸುತ್ತಾರೆ ಮತ್ತು ಮುಂದಿನ ದಾರಿ ತೋರಿಸುತ್ತಾರೆ” ಎಂದು ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.