ನವದೆಹಲಿ: ವೇದಾಂತ ಕೇಸರಿ, ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ ಸ್ವಾಮಿ ವಿವೇಕಾನಂದರ ಸ್ಮೃತಿ ದಿವಸವನ್ನು ಇಂದು ದೇಶದಲ್ಲಿ ಆಚರಣೆ ಮಾಡಲಾಗುತ್ತಿದೆ. ಜನವರಿ 12, 1897 ರಂದು ಕೋಲ್ಕತ್ತಾದಲ್ಲಿ ಜನಿಸಿದ ವಿವೇಕಾನಂದರಿಗೆ ಜನನ ಸಮಯದಲ್ಲಿ ಇಟ್ಟ ಹೆಸರು ನರೇಂದ್ರನಾಥ ದತ್ತ. ಅವರು ಸಂನ್ಯಾಸಿಯಾದಾಗ ಸ್ವಾಮಿ ವಿವೇಕಾನಂದ ಎಂಬ ಹೆಸರನ್ನು ಪಡೆದರು. ಅವರು ಜುಲೈ 4, 1902 ರಂದು 39 ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು.
ಅದಮ್ಯ ನಾಯಕತ್ವದ ಗುಣವನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರು ಜೀವನ ಮತ್ತು ಧರ್ಮದ ತತ್ತ್ವಶಾಸ್ತ್ರದ ಬಗ್ಗೆ ಆಳವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಅವರು ವೇದಾಂತ ಮತ್ತು ಯೋಗದ ಭಾರತೀಯ ತತ್ತ್ವಚಿಂತನೆಗಳನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ವಿವೇಕಾನಂದರು ಕೋಲ್ಕತಾ ಬಳಿಯ ಗಂಗಾ ನದಿಯಲ್ಲಿರುವ ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು.
ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಪಸರಿಸಿದ ಕೆಲವು ಅಮೂಲ್ಯ ಸಂದೇಶಗಳು ಇಂತಿವೆ:-
*ನಾವು ಒಳಗಿನಿಂದ ಹೊರಗೆ ಬೆಳೆಯಬೇಕು. ಯಾರೂ ನಮಗೆ ಕಲಿಸಲು ಸಾಧ್ಯವಿಲ್ಲ, ಯಾರೂ ನಮ್ಮನ್ನು ಆಧ್ಯಾತ್ಮಿಕರನ್ನಾಗಿ ಮಾಡಲು ಸಾಧ್ಯವಿಲ್ಲ. ನಮ್ಮ ಸ್ವಂತ ಆತ್ಮವನ್ನು ಹೊರತುಪಡಿಸಿ ಬೇರೆ ಶಿಕ್ಷಕರು ಇಲ್ಲ.
*ನಾವು ಎಷ್ಟು ಹೆಚ್ಚು ಹೊರಬಂದು ಇತರರಿಗೆ ಒಳ್ಳೆಯದನ್ನು ಮಾಡುತ್ತೇವೆಯೋ ಅಷ್ಟು ನಮ್ಮ ಹೃದಯಗಳು ಶುದ್ಧವಾಗುತ್ತವೆ ಮತ್ತು ದೇವರು ಅಲ್ಲಿ ನೆಲೆಸುತ್ತಾನೆ.
*ನಮ್ಮ ಆಲೋಚನೆಗಳು ನಮ್ಮನ್ನು ರೂಪಿಸಿವೆ. ಆದ್ದರಿಂದ ನಮ್ಮ ಅನಿಸಿಕೆಗಳ ಬಗ್ಗೆ ನಾವು ಕಾಳಜಿ ವಹಿಸಬೇಕು.
*ನಿಮ್ಮ ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಿ. ನೀವು ಗೆದ್ದರೆ, ನೀವು ಮುನ್ನಡೆಸಬಹುದು, ಸೋತರೆ ಮಾರ್ಗದರ್ಶನ ನೀಡಬಹುದು.
ಸ್ವಾಮಿ ವಿವೇಕಾನಂದರು 20ನೇ ಶತಮಾನದಲ್ಲಿ ವೇದಾಂತ ಧರ್ಮದ ಆದರ್ಶಗಳನ್ನು ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ, ಅವರು ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯ ಸಮುದಾಯದಲ್ಲೂ ತಮ್ಮ ವ್ಯಕ್ತಿತ್ವದಿಂದಾಗಿ ಅಳಿಸಲಾಗದ ಹೆಗ್ಗುರುತಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.