ನವದೆಹಲಿ: ನೇಪಾಳದಲ್ಲಿ ಪ್ರಸ್ತುತ ರಾಜಕೀಯ ಬಿಕ್ಕಟ್ಟು ಉದ್ಭವಿಸಿರುವ ನಡುವೆಯೇ, ಹಿಮಾಲಯ ದೇಶದಲ್ಲಿ ಭಾರತದ ಪ್ರಭಾವವನ್ನು ಕೊನೆಗೊಳಿಸಲು ಚೀನಾ ಮತ್ತು ಪಾಕಿಸ್ಥಾನ ದೊಡ್ಡ ಪಿತೂರಿ ನಡೆಸುತ್ತಿವೆ. ಭಾರತೀಯ ಭದ್ರತಾ ಸಂಸ್ಥೆಗಳ ಪ್ರಕಾರ, ಚೀನಾ ನೇಪಾಳದಲ್ಲಿ ಮಧ್ಯಸ್ಥಿಕೆ ವಹಿಸುತ್ತಿದೆ. ಕೋವಿಡ್-19 ಹೆಸರಿನಲ್ಲಿ ಸಹಾಯ ಮಾಡುವುದಾಗಿ ಚೀನಾ ವೈದ್ಯಕೀಯ ಸಿಬ್ಬಂದಿಯ ಮೂಲಕ ನೇಪಾಳದಲ್ಲಿ ಗೂಢಾಚರಿಗಳನ್ನು ನಿಯೋಜಿಸುತ್ತಿದೆ.
ವರದಿಯ ಪ್ರಕಾರ, ಚೀನಾದ ಗುಪ್ತಚರ ಸಂಸ್ಥೆ ಮಿಲಿಟರಿ ಆಫ್ ಸ್ಟೇಟ್ ಸೆಕ್ಯುರಿಟಿ (ಎಂಎಸ್ಎಸ್) ನೇಪಾಳದಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುತ್ತಿದೆ. ಎಂಎಸ್ಎಸ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಗುಪ್ತಚರ ಮತ್ತು ರಹಸ್ಯ ಪೊಲೀಸ್ ಏಜೆನ್ಸಿಯಾಗಿದೆ. ವಿದೇಶದಲ್ಲಿ ಇದು ಗೂಢಚರ್ಯೆಯಲ್ಲಿ ತೊಡಗಿಕೊಂಡಿದೆ.
ಎಂಎಸ್ಎಸ್ ಅನ್ನು ವಿಶ್ವದ ಅತ್ಯಂತ ರಹಸ್ಯ ಗುಪ್ತಚರ ಘಟಕವೆಂದು ಪರಿಗಣಿಸಲಾಗಿದೆ. ಸ್ವತಂತ್ರ ವಿಶ್ಲೇಷಕರ ಪ್ರಕಾರ, ನೇಪಾಳ ಮತ್ತು ಭಾರತದ ನಡುವಿನ ಗಡಿ ವಿವಾದದ ಲಾಭವನ್ನು ಪಾಕಿಸ್ಥಾನ ಕೂಡ ಪಡೆದುಕೊಳ್ಳುತ್ತಿದೆ.
ಪಾಕಿಸ್ಥಾನದ ಏಜೆನ್ಸಿಗಳು ಪ್ರಧಾನಿ ಒಲಿ ಮತ್ತು ನೇಪಾಳದ ಇತರ ಪ್ರಮುಖ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿವೆ, ಅವರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಹವಣಿಸುತ್ತಿದೆ. ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಒಲಿಗೆ ಬೆಂಬಲ ನೀಡಿದ್ದಾರೆ. ನೇಪಾಳದ ವಿದೇಶಾಂಗ ಸಚಿವಾಲಯಕ್ಕೆ ಔಪಚಾರಿಕ ನೋಟಿಸ್ ಕಳುಹಿಸಿದ್ದಾರೆ ಮತ್ತು ಒಲಿಯೊಂದಿಗೆ ಕರೆ ಮಾಡಿ ಮಾತನಾಡಲು ಪ್ರಸ್ತಾಪಿಸಿದ್ದಾರೆ.
ಅಷ್ಟೇ ಅಲ್ಲ, ನೇಪಾಳದ ಆಂತರಿಕ ಬೆಳವಣಿಗೆಗಳ ಮೇಲೆ ಕಣ್ಣಿಡುವ ಸಲುವಾಗಿ ಪಾಕಿಸ್ಥಾನದ ನಟೋರಿಯಸ್ ಐಎಸ್ಐ ಕಠ್ಮಂಡುವಿನ ಪಾಕಿಸ್ಥಾನ ರಾಯಭಾರ ಕಚೇರಿಯಲ್ಲಿ ತನ್ನ ಏಜೆಂಟರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಯೂನಿಫೈಡ್ ನೇಪಾಳ್ ನ್ಯಾಷನಲ್ ಫ್ರಾಂಟ್ ನಾಯಕ ಫನೀಂದ್ರ ಕಳೆದ ಕೆಲವು ತಿಂಗಳುಗಳಿಂದ ಕಠ್ಮಂಡುವಿನಲ್ಲಿರುವ ಪಾಕಿಸ್ಥಾನ ಮತ್ತು ಚೀನಾ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಚೀನಾ ತನ್ನ ನೆರೆಹೊರೆಯವರನ್ನು ಕೆರಳಿಸುವ ಮೂಲಕ ಭಾರತಕ್ಕೆ ತೊಂದರೆ ಉಂಟುಮಾಡಲು ನೋಡುತ್ತಿದೆ. ಚೀನಾ ಮತ್ತು ಪಾಕಿಸ್ಥಾನ ಎರಡೂ ನೇಪಾಳವನ್ನು ಭಾರತದ ವಿರುದ್ಧ ಪ್ರಚೋದಿಸುವ ಮೂಲಕ ಮತ್ತೊಂದು ಸುತ್ತಿನ ಹೋರಾಟವನ್ನು ಪುನರ್ ತೆರೆಯಲು ಯೋಜಿಸುತ್ತಿವೆ. ನೇಪಾಳದಲ್ಲಿ ಚೀನಾದ ರಾಯಭಾರಿ ಹೌ ಯಾಂಕಿ ಭಾರತದ ವಿರುದ್ಧ ನೇಪಾಳವನ್ನು ಪ್ರಚೋದಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ವಿಶೇಷವೆಂದರೆ, ಹೌ ಯಾಂಕಿಯನ್ನು ನೇಪಾಳದ ರಾಯಭಾರಿಯನ್ನಾಗಿ ಮಾಡುವ ಮೊದಲು ಪಾಕಿಸ್ಥಾನದಲ್ಲಿ ಅವರನ್ನು ಕೆಲ ದಿನ ಇರಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.