ನ್ಯೂಯಾರ್ಕ್: ಅಮೆರಿಕಾದ ಸ್ವಾತಂತ್ರ್ಯ ದಿನದ ಅಂಗವಾಗಿ ಅಮೆರಿಕ ಫೌಂಡೇಶನ್ ನೀಡುವ ‘ಸಾಧಕ ವಲಸಿಗರು’ ಪ್ರಶಸ್ತಿಗೆ ಈ ಬಾರಿ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳು ಆಯ್ಕೆಯಾಗಿದ್ದಾರೆ.
ನ್ಯೂಯಾರ್ಕ್ನ ಕಾರ್ನಿಜ್ ಕಾರ್ಪೊರೇಷನ್ ಈ ಪ್ರಶಸ್ತಿಗೆ ಭಾರತೀಯ ಮೂಲದ ಇಬ್ಬರನ್ನು ಆಯ್ಕೆ ಮಾಡಿದ್ದು, ಪುಲಿಟ್ಜರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸಿದ್ಧಾರ್ಥ ಮುಖರ್ಜಿ, ಹಾರ್ವರ್ಡ್ ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊಫೆಸರ್ ರಾಜ್ ಶೆಟ್ಟಿ ಅವರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಗೆ ಒಟ್ಟು 38 ಜನರನ್ನು ಆಯ್ಕೆ ಮಾಡಲಾಗಿದ್ದು. ಅವರಲ್ಲಿ ಇಬ್ಬರು ಭಾರತೀಯರಾಗಿದ್ದಾರೆ. ಈ ಇಬ್ಬರೂ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ನೀಡಿರುವ ಗಣನೀಯ ಸೇವೆಯನ್ನು ಆಧರಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಜನರ ಆರ್ಥಿಕ ವ್ಯವಸ್ಥೆಯ ಮೇಲೆ ಕೊರೋನಾ ಪರಿಣಾಮ ಕುರಿತ ಅಧ್ಯಯನಕ್ಕೆ ಅವರು ನೀಡಿರುವ ಸಹಕಾರವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಶಸ್ತಿಯನ್ನು ಈ ಇಬ್ಬರಿಗೆ ನೀಡಲಾಗುತ್ತಿದೆ. ಇವರು ನೀಡಿದ ಸಂಪನ್ಮೂಲಗಳನ್ನು ಆಧರಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಸಹಕಾರಿಯಾಗಿತ್ತು.
ಈ ಇಬ್ಬರೂ ಗಣ್ಯರು ಭಾರತದ ದೆಹಲಿಯಲ್ಲಿ ಜನಿಸಿದವರಾಗಿದ್ದು, ಸಿದ್ಧಾರ್ಥ ಮುಖರ್ಜಿ ಅವರು ಪ್ರಖ್ಯಾತ ಜೀವಶಾಸ್ತ್ರಜ್ಞರಾಗಿದ್ದು, ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೊಲಂಬಿಯಾ ವಿವಿಯ ಬೋಧಕರಾಗಿರುವ ಇವರಿಗೆ ಪ್ರಖ್ಯಾತ ಪುಲಿಟ್ಜರ್ ಪ್ರಶಸ್ತಿಯೂ ಸಂದಿದೆ. 2014 ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರವೂ ಲಭಿಸಿದೆ. ಅವರು ನ್ಯೂಯಾರ್ಕ್ನ ಬ್ಲೂ ರಿಬ್ಬನ್ ಕಮಿಷನ್ ನ 15 ಮಂದಿ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಪ್ರೊ. ರಾಜ್ ಶೆಟ್ಟಿ ಅವರು ಈ ಪ್ರಶಸ್ತಿಗೆ ಭಾಜನರಾಗುತ್ತಿರುವ ಹಾರ್ವರ್ಡ್ ವಿವಿಯ ಕಿರಿಯ ಪ್ರಾಧ್ಯಾಪಕರಾಗಿದ್ದಾರೆ. ಇವರು ಅಪರ್ಚುನಿಟಿ ಇನ್ಸೈಟಿಸ್ ಎಂಬ ಪ್ರಯೋಗಾಲಯವನ್ನೂ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.