ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಒಂಬತ್ತು ಖಲಿಸ್ಥಾನಿ ಉಗ್ರರನ್ನು ಗೊತ್ತುಪಡಿಸಿದ ಭಯೋತ್ಪಾದಕ ಪಟ್ಟಿಯಲ್ಲಿ ಭಾರತ ಬುಧವಾರ ಸೇರ್ಪಡೆಗೊಳಿಸಿದೆ.
“ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಬದ್ಧತೆ ಮತ್ತು ಭಯೋತ್ಪಾದನೆಯನ್ನು ಸಹಿಸಿಕೊಳ್ಳದ ಮೋದಿ ಸರ್ಕಾರದ ನೀತಿಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯವು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಯುಎಪಿಎ ಕಾಯ್ದೆಯ ನಿಬಂಧನೆಗಳ ಪ್ರಕಾರ ಒಂಬತ್ತು ಖಲಿಸ್ಥಾನಿ ಉಗ್ರರನ್ನು ಗೊತ್ತುಪಡಿಸಿದ ಭಯೋತ್ಪಾದಕರು ಎಂದು ಇಂದು ಘೋಷಿಸಿದೆ” ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಈ ವ್ಯಕ್ತಿಗಳು ಗಡಿ ಮತ್ತು ವಿದೇಶಿ ಮಣ್ಣಿನಿಂದ ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ದೇಶವನ್ನು ಅಸ್ಥಿರಗೊಳಿಸುವ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಮ್ಮ ರಾಷ್ಟ್ರ ವಿರೋಧಿ ಚಟುವಟಿಕೆಗಳ ಮೂಲಕ ಮತ್ತು ಖಲಿಸ್ಥಾನ ಚಳುವಳಿಗೆ ಬೆಂಬಲ ನೀಡುವ ಮೂಲಕ ಪಂಜಾಬ್ನಲ್ಲಿ ಉಗ್ರತೆಯನ್ನು ಪುನರುಜ್ಜೀವನಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ”ಎಂದು ಪ್ರಕಟಣೆ ಹೇಳಿದೆ.
ಗೊತ್ತುಪಡಿಸಿದ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆಗೊಂಡ ಖಲಿಸ್ಥಾನಿ ಉಗ್ರರೆಂದರೆ-
1. ವಾಧವ ಸಿಂಗ್ ಬಬ್ಬರ್: ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ “ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್” ಮುಖ್ಯಸ್ಥ .
2. ಲಖಬೀರ್ ಸಿಂಗ್: ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ “ಇಂಟರ್ನ್ಯಾಷನಲ್ ಸಿಖ್ ಯೂತ್ ಫೆಡರೇಶನ್” ಮುಖ್ಯಸ್ಥ.
3. ರಂಜೀತ್ ಸಿಂಗ್: ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ “ಖಖಲಿಸ್ಥಾನ್ ಜಿಂದಾಬಾದ್ ಫೋರ್ಸ್” ಮುಖ್ಯಸ್ಥ.
4. ಪರಮ್ಜಿತ್ ಸಿಂಗ್: ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆ “ಖಲಿಸ್ಥಾನ್ ಕಮಾಂಡೋ ಫೋರ್ಸ್” ಮುಖ್ಯಸ್ಥ.
5. ಭೂಪಿಂದರ್ ಸಿಂಗ್ ಭಿಂದಾ: ಜರ್ಮನಿ ಮೂಲದ ಭಯೋತ್ಪಾದಕ ಸಂಘಟನೆ “ಖಲಿಸ್ಥಾನ್ ಜಿಂದಾಬಾದ್ ಫೋರ್ಸ್”ನ ಪ್ರಮುಖ ಸದಸ್ಯ.
6. ಗುರ್ಮೀತ್ ಸಿಂಗ್ ಬಗ್ಗ: ಜರ್ಮನಿ ಮೂಲದ ಭಯೋತ್ಪಾದಕ ಸಂಘಟನೆ “ಖಲಿಸ್ಥಾನ್ ಜಿಂದಾಬಾದ್ ಫೋರ್ಸ್”ನ ಪ್ರಮುಖ ಸದಸ್ಯ.
7. ಗುರ್ಪತ್ವಂತ್ ಸಿಂಗ್ ಪನ್ನುನ್: ಯುಎಸ್ಎ ಮೂಲದ ಕಾನೂನುಬಾಹಿರ ಸಂಘಟನೆ, “ಸಿಖ್ ಫಾರ್ ಜಸ್ಟೀಸ್”ನ ಪ್ರಮುಖ ಸದಸ್ಯ.
8. ಹರ್ದೀಪ್ ಸಿಂಗ್ ನಿಜ್ಜಾರ್: ಕೆನಡಾ ಮೂಲದ “ಖಲಿಸ್ಥಾನ್ ಟೈಗರ್ ಫೋರ್ಸ್”ನ ಮುಖ್ಯಸ್ಥ.
9. ಪರಮ್ಜಿತ್ ಸಿಂಗ್: ಯುನೈಟೆಡ್ ಕಿಂಗ್ಡಮ್ ಮೂಲದ ಭಯೋತ್ಪಾದಕ ಸಂಘಟನೆ “ಬಬ್ಬರ್ ಖಲ್ಸಾ ಇಂಟರ್ನ್ಯಾಷನಲ್” ಮುಖ್ಯಸ್ಥ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967ಗೆ ತಿದ್ದುಪಡಿ ತರುವ ಮೂಲಕ ಮೋದಿ ಸರ್ಕಾರವು ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸುವ ಅವಕಾಶವನ್ನು ಮಾಡಿಕೊಟ್ಟಿತು. ಈ ತಿದ್ದುಪಡಿಗೂ ಮುಂಚಿತವಾಗಿ, ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಸಂಘಟನೆಗಳಾಗಿ ಘೋಷಿಸಬಹುದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.