ನವದೆಹಲಿ: ದೆಹಲಿಯ ಲೋಧಿ ಎಸ್ಟೇಟ್ನಲ್ಲಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರವು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಅವರಿಗೆ ನೀಡಲಾದ ಎಸ್ಪಿಜಿ ಭದ್ರತೆಯನ್ನು ಹಿಂತೆಗೆದುಕೊಳ್ಳಲಾದ ಹಿನ್ನೆಲೆಯಲ್ಲಿ ಬಂಗಲೆಯನ್ನು ಖಾಲಿ ಮಾಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಈಗ ಹೊಸ ರಾಜಕೀಯ ಕ್ರಮಕ್ಕೆ ಯೋಜಿಸುತ್ತಿದ್ದಾರೆ. ಪ್ರಿಯಾಂಕಾ ಅವರ ಆಪ್ತ ಮೂಲಗಳು, ಅವರು ಈಗ ಉತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ ಮತ್ತು ಲಕ್ನೋದ ಬಂಗಲೆಯಲ್ಲಿ ಉಳಿಯಲಿದ್ದಾರೆ ಎಂದು ಹೇಳಿದರು.
ಒಂದು ತಿಂಗಳೊಳಗೆ ಅಂದರೆ ಆಗಸ್ಟ್ 1ರೊಳಗೆ ಮನೆ ಖಾಲಿ ಮಾಡುವ ಸೂಚನೆಯನ್ನು ಕೇಂದ್ರ ಪ್ರಿಯಾಂಕಾ ಗಾಂಧಿಗೆ ಬುಧವಾರ ರವಾನಿಸಿದೆ.
ಪ್ರಿಯಾಂಕಾ ಅವರಿಗೆ ಸಿಆರ್ಪಿಎಫ್ ರಕ್ಷಣೆಯೊಂದಿಗೆ ಝಡ್ + ಭದ್ರತೆಯನ್ನು ಈ ಹಿಂದೆ ಒಗಿಸಲಾಗಿತ್ತು. ಹೀಗಾಗಿ ಅವರಿಗೆ ಫೆಬ್ರವರಿ 21, 1997 ರಂದು ಎಸ್ಪಿಜಿ ರಕ್ಷಕರ ಭದ್ರತಾ ನೆಲೆಯಲ್ಲಿ ಬಂಗಲೆ ಸಂಖ್ಯೆ 35, ಲೋಧಿ ಎಸ್ಟೇಟ್ ನೀಡಲಾಯಿತು. ಆದರೆ ಮೋದಿ ಸರ್ಕಾರ ಬಂದ ಬಳಿಕ ಕೇಂದ್ರ ಗೃಹ ಸಚಿವಾಲಯ ಈ ಭದ್ರತೆಯನ್ನು ರದ್ದುಗೊಳಿಸಿತ್ತು. ಈಗ ಅವರು ಎಸ್ಪಿಜಿ ರಕ್ಷಣೆಯ ವ್ಯಾಪ್ತಿಯಲ್ಲಿ ಇಲ್ಲ, ಹೀಗಾಗಿ ಬಂಗಲೆಯನ್ನು ಖಾಲಿ ಮಾಡಲು ಅವರಿಗೆ ಸೂಚಿಸಲಾಗಿದೆ.
ಬಂಗಲೆ ಖಾಲಿ ಮಾಡಲೇ ಬೇಕಾಗಿರುವ ಅನಿವಾರ್ಯತೆಯಲ್ಲಿ ಸಿಲುಕಿರುವ ಪ್ರಿಯಾಂಕ, ಉತ್ತರಪ್ರದೇಶದ 2022ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಲಕ್ನೋದಲ್ಲಿ ನೆಲೆಸುವ ತಯಾರಿ ಮಾಡಿದ್ದಾರೆ. ಅವರು ಲಖನೌದ ‘ಕೌಲ್ ಹೌಸ್’ ಗೆ ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ. ಈ ಬಂಗಲೆ ಇಂದಿರಾ ಗಾಂಧಿಯ ಚಿಕ್ಕಮ್ಮ ಶೀಲಾ ಕೌಲ್ಗೆ ಸೇರಿದೆ. ಶೀಲಾ ಕೌಲ್ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು ಮತ್ತು ಕಾಂಗ್ರೆಸ್ ನ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಲಖನೌದಲ್ಲಿನ ‘ಕೌಲ್ ಹೌಸ್’ ನ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.