ನವದೆಹಲಿ: ಭಾರತೀಯ ನೌಕಾ ಹಡಗು ಐಎನ್ಎಸ್ ಜಲಾಶ್ವ ಇಂದು ಬೆಳಿಗ್ಗೆ ಇರಾನ್ನಲ್ಲಿ ಸಿಲುಕಿ ಹಾಕಿಕೊಂಡಿದ್ದ 687 ಭಾರತೀಯರನ್ನು ಮರಳಿ ತವರಿಗೆ ಕರೆ ತಂದಿದೆ. ಈ ಉಭಯಚರ ನೌಕಾ ಹಡಗು ತಮಿಳುನಾಡಿನ ತೂತುಕುಡಿಯ ವಿಒಸಿ ಬಂದರಿಗೆ ಆಗಮಿಸಿದೆ. ಕೇಂದ್ರ ಸರ್ಕಾರದ ಆಪರೇಷನ್ ಸಮುದ್ರ ಸೇತು ಅಡಿಯಲ್ಲಿ ಹಡಗು ಮಾನವೀಯ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಕಳೆದ ಗುರುವಾರ ಸಂಜೆ ಇರಾನ್ನ ಬಂದರು ಅಬ್ಬಾಸ್ ಬಂದರಿನಿಂದ 687 ಭಾರತೀಯರೊಂದಿಗೆ ಹೊರಟ ಐಎನ್ಎಸ್ ಜಲಾಶ್ವ ಭಾರತದತ್ತ ಪ್ರಯಾಣ ಬೆಳೆಸಿತು ಎಂದು ವರದಿಗಳು ತಿಳಿಸಿವೆ. ಕೋವಿಡ್-19 ಲಾಕ್ಡೌನ್ನಿಂದಾಗಿ ಇರಾನಿನಲ್ಲಿ ಸಿಲುಕಿ ಹಾಕಿದ್ದ ಭಾರತೀಯರು ಇವರಾಗಿದ್ದು, ಎಲ್ಲರೂ ಮೀನುಗಾರರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ
ಮಾನವೀಯ ಕಾರ್ಯಾಚರಣೆಗೆ ಹಡಗನ್ನು ಬಳಸುವುದಕ್ಕೆ ಇರಾನಿನಲ್ಲಿನ ಭಾರತೀಯ ಮಿಷನ್ ಮತ್ತು ಇರಾನ್ನ ಆಡಳಿತವು ಅನುಕೂಲ ಮಾಡಿಕೊಟ್ಟಿತು. ತೂತುಕುಡಿಯ ವಿಒಸಿ ಬಂದರಿಗೆ ಇದು ನಾಲ್ಕನೇ ಬಾರಿಗೆ ಭಾರತೀಯರನ್ನು ಹೊತ್ತು ಐಎನ್ಎಸ್ ಹಡಗು ಆಪರೇಷನ್ ಸಮುದ್ರ ಸೇತು ಅಡಿಯಲ್ಲಿ ಆಗಮಿಸುತ್ತಿದೆ.
ಭಾರತೀಯ ಕಡಲ ಹಿತಾಸಕ್ತಿಗಳನ್ನು ರಕ್ಷಿಸುವುದರಿಂದ ಹಿಡಿದು ಮಾನವೀಯ ನೆರವಿನವರೆಗೆ ಭಾರತೀಯ ನೌಕೆ ವಹಿಸುತ್ತಿರುವ ವೈವಿಧ್ಯಮಯ ಪಾತ್ರಕ್ಕೆ ಈ ಕಾರ್ಯಾಚರಣೆಯು ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.