ನವದೆಹಲಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಂಗಳವಾರ, ದುಬೈ ಮೂಲದ ಇಂಡಿಯನ್ ಆಯಿಲ್ನ ಸಬ್ಸಿಡಿಯರಿಯಾದ ಐಒಸಿ ಮಿಡ್ಲ್ ಈಸ್ಟ್ FZE ಮತ್ತು ಬೆಕ್ಸಿಮ್ಕೊ ಗ್ರೂಪ್ನ ಆರ್ಆರ್ ಹೋಲ್ಡಿಂಗ್ಸ್ ಲಿಮಿಟೆಡ್ ನಡುವಣ ಜಂಟಿ ಉದ್ಯಮ ಒಪ್ಪಂದಕ್ಕೆ (ಜೆವಿಎ) ಸಹಿ ಹಾಕಿದರು.
ಬಾಂಗ್ಲಾದೇಶದ ಪ್ರಧಾನಿ ಅವರ ಸಲಹೆಗಾರ ಸಲ್ಮಾನ್ ಫಜ್ಲೂರ್ ರಹಮಾನ್, ಅಲ್ಲಿನ ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲ ಸಚಿವ ಹೆಚ್.ಇ.ನಸ್ರುಲ್ ಹಮೀದ್ ಅವರ ಉಪಸ್ಥಿತಿಯಲ್ಲಿ ಸಹಿ ಹಾಕಲಾಗಿದೆ. ಈ ಜಂಟಿ ಉದ್ಯಮದ ಮೂಲಕ, ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್)ದ ಜೊತೆಗೆ ಬೆಕ್ಸಿಮ್ಕೊ ಕಂಪನಿಯು ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ತಳಮಟ್ಟದಲ್ಲಿ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಲು ಯೋಜಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ್ ಅವರು, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದೀರ್ಘಕಾಲದ ಸಂಬಂಧದ ಬಗ್ಗೆ ಇತಿಹಾಸ, ಸಂಸ್ಕೃತಿ ಮತ್ತು ಹಂಚಿಕೆಯ ತ್ಯಾಗವನ್ನು ಉಲ್ಲೇಖಿಸಿದರು. ಭಾರತ-ಬಾಂಗ್ಲಾದೇಶ ಸಂಬಂಧದಲ್ಲಿ ಇಂಧನ ಕ್ಷೇತ್ರದ ಪಾತ್ರದ ಬಗ್ಗೆ ಮಾತನಾಡುತ್ತಾ ಅವರು, “ನನಗೆ ಸಂತೋಷವಾಗಿದೆ ನಮ್ಮ ಉಭಯ ದೇಶಗಳ ನಡುವಿನ ಇಂಧನ ಸಹಕಾರವು ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ ಎಂಬುದು ಗಮನಾರ್ಹ. ಇದು ನಮ್ಮ “ನೆರೆಹೊರೆ ಮೊದಲು” ನೀತಿಯ ಭಾಗವಾಗಿ ಬಾಂಗ್ಲಾದೇಶದೊಂದಿಗೆ “ಶಕ್ತಿ ಸೇತುವೆ” ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಒಂದು ಭಾಗವಾಗಿದೆ. ಅಕ್ಟೋಬರ್ 2019 ರಲ್ಲಿ ಬಾಂಗ್ಲಾದೇಶದ ಪ್ರಧಾನ ಮಂತ್ರಿ ನವದೆಹಲಿಗೆ ಭೇಟಿ ನೀಡಿದ್ದು ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಿತು ಮತ್ತು ಸಹಕಾರದ ಹೊಸ ದೃಷ್ಟಿಕೋನಗಳನ್ನು ತೆರೆಯಿತು” ಎಂದಿದ್ದಾರೆ.
ಜಂಟಿ ಉದ್ಯಮ ಒಪ್ಪಂದದ ಕುರಿತು ಮಾತನಾಡಿದ ಅವರು, “ಈ ಒಪ್ಪಂದ ಬಾಂಗ್ಲಾದೇಶದೊಂದಿಗೆ ದ್ವಿಪಕ್ಷೀಯ ಇಂಧನ ಸಹಕಾರವನ್ನು ವಿಸ್ತರಿಸುವ ಮತ್ತೊಂದು ಹೆಜ್ಜೆಯನ್ನು ಸೂಚಿಸುತ್ತದೆ ಮತ್ತು ಎಲ್ಪಿಜಿಯ ಗ್ರಾಮೀಣ ಪ್ರವೇಶವನ್ನು ಹೆಚ್ಚಿಸಿ ಶುದ್ಧ ಅಡುಗೆ ಇಂಧನ ಕಲ್ಪಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅನುಷ್ಠಾನಗೊಳಿಸುವಲ್ಲಿ ಪ್ರವರ್ತಕನಾಗಿರುವ ಇಂಡಿಯನ್ ಆಯಿಲ್ಗೆ ಈ ಕ್ಷೇತ್ರದಲ್ಲಿ ದೊಡ್ಡ ಅನುಭವವಿದೆ. ಭಾರತದಲ್ಲಿ, ಬಾಂಗ್ಲಾದೇಶದಲ್ಲಿ ಎಲ್ಪಿಜಿ ಬಳಕೆಯನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಬಾಂಗ್ಲಾದೇಶದಲ್ಲಿ ಈ ಜಂಟಿ ಉದ್ಯಮವು ಬಾಂಗ್ಲಾದೇಶದಲ್ಲಿ ಶುದ್ಧ ಅಡುಗೆ ಇಂಧನದ ಪ್ರವೇಶವನ್ನು ಹೆಚ್ಚಿಸುವ ಮೂಲಕ ಸಾಮಾಜಿಕ-ಆರ್ಥಿಕ ಬದಲಾವಣೆಯ ವೇಗವರ್ಧಕವಾಗಲಿದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.