ನವದೆಹಲಿ: ದೇಶಾದ್ಯಂತ ಕೊರೋನಾ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಬೇಡಿಕೆಯನ್ನು ಪೂರೈಸಲು ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಹೆಚ್ಚುವರಿಯಾಗಿ 355 ಬೋಗಿಗಳನ್ನು ಪ್ರತ್ಯೇಕ (ಐಸೋಲೇಷನ್) ವಾರ್ಡ್ಗಳಾಗಿ ಪರಿವರ್ತಿಸಿದೆ ಎಂದು ವರದಿಗಳು ತಿಳಿಸಿವೆ.
ಸೋಂಕು ಹೆಚ್ಚಾದಂತೆ, ಅಸ್ತಿತ್ವದಲ್ಲಿರುವ 80,000 ಹಾಸಿಗೆಗಳ ಬಲಕ್ಕೆ 5,680 ಐಸೋಲೇಷನ್ ಹಾಸಿಗೆಗಳನ್ನು ಸೇರಿಸಲಾಗಿದೆ. ಇಳಿಕೆಯ ಯಾವುದೇ ಲಕ್ಷಣಗಳನ್ನು ಕೋವಿಡ್ -19 ಪ್ರಕರಣಗಳು ತೋರಿಸುತ್ತಿಲ್ಲ, ಪ್ರಸ್ತುತ ಭಾರತದಲ್ಲಿ ಪ್ರಕರಣಗಳು ಸುಮಾರು 6 ಲಕ್ಷವನ್ನು ಮುಟ್ಟುತ್ತಿವೆ, ಸಾವುನೋವುಗಳು 18,000 ಕ್ಕಿಂತಲೂ ಹೆಚ್ಚಾಗಿದೆ, ಇದು ಸರ್ಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಹೆಚ್ಚಿನ ಆತಂಕವನ್ನುಂಟುಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.
ಉತ್ತರ ವಲಯದ ವಿವಿಧ ರೈಲ್ವೆ ವಿಭಾಗಗಳು ಮತ್ತು ವರ್ಕ್ಶಾಪ್ಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತಿಸಲಾಗಿದೆ ಮತ್ತು ತುರ್ತು ಬಳಕೆಗೆ ಇವುಗಳನ್ನು ಸಿದ್ಧಗೊಳಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಗಧ್ರಿ, ಚಾರ್ಬಾಗ್ ಮತ್ತು ಆಲಂಬಾಗ್ನಲ್ಲಿನ ರೈಲ್ವೆ ವರ್ಕ್ಶಾಪ್ಗಳಲ್ಲಿ 262 ಬೋಗಿಗಳನ್ನು ಪರಿವರ್ತಿಸಲಾಗಿದ್ದು, 93 ರೈಲುಗಳನ್ನು ಉತ್ತರಪ್ರದೇಶ, ದೆಹಲಿ, ಅಂಬಾಲಾ, ಲಕ್ನೋ, ಫಿರೋಜ್ಪುರ ಮತ್ತು ಮೊರಾದಾಬಾದ್ ಸೇರಿದಂತೆ ವಿವಿಧ ರೈಲ್ವೆ ವಿಭಾಗಗಳಲ್ಲಿ ಮರುಹೊಂದಿಸಲಾಗಿದೆ.. ಉತ್ತರ ವಲಯವು ಈ ಹಿಂದೆ 540 ಬೋಗಿಗಳನ್ನು ಶಂಕಿತ ರೋಗಿಗಳ ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಿತ್ತು, ಅದರಲ್ಲಿ 503 ಅನ್ನು ಪ್ರಸ್ತುತ ಆನಂದ್ ವಿಹಾರ್ ಮತ್ತು ಶಕುರಬಸ್ತಿ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ. ಶಕುರಬಸ್ತಿಯಲ್ಲಿ ಒಟ್ಟು 32 ಶಂಕಿತ ರೋಗಿಗಳನ್ನು ಐಸೋಲೇಷನ್ ಕೋಚ್ಗಳಲ್ಲಿ ದಾಖಲಿಸಲಾಗಿದ್ದು, ಅದರಲ್ಲಿ ಒಂಬತ್ತು ಮಂದಿ ಈಗಾಗಲೇ ಹೊರಟು ಹೋಗಿದ್ದಾರೆ ಮತ್ತು 24 ಮಂದಿ ಇನ್ನೂ ಈ ಕೋವಿಡ್ ಕೇರ್ ಕೇಂದ್ರಗಳಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ರೈಲ್ವೆ 960 ಐಸೋಲೇಷನ್ ಬೋಗಿಗಳನ್ನು 15,360 ಹಾಸಿಗೆಗಳೊಂದಿಗೆ ಐದು ರಾಜ್ಯಗಳಿಗೆ ಒದಗಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ಕೋವಿಡ್ ಆರೈಕೆ ಬೋಗಿಗಳನ್ನು (503) ನಿಯೋಜಿಸಲಾಗಿದ್ದು, ನಂತರದ ಸ್ಥಾನದಲ್ಲಿ ಉತ್ತರಪ್ರದೇಶದಲ್ಲಿ 372, ತೆಲಂಗಾಣದಲ್ಲಿ 60, ಆಂಧ್ರಪ್ರದೇಶದಲ್ಲಿ 20 ಮತ್ತು ಮಧ್ಯಪ್ರದೇಶದಲ್ಲಿ ಐದು ಬೋಗಿಗಳನ್ನು ನಿಯೋಜಿಸಲಾಗಿದೆ.
ಮುಂಬರುವ ದಿನಗಳಲ್ಲೂ ರೈಲ್ವೆ ಇನ್ನಷ್ಟು ಕೋವಿಡ್-19 ಆರೈಕೆ ಕೇಂದ್ರಗಳನ್ನು ರಚನೆ ಮಾಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.