ನವದೆಹಲಿ : ಕೊರೋನಾ ಲಾಕ್ಡೌನ್ ಕ್ರಮವನ್ನು ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಜೂನ್ 8 ರಿಂದ ತೊಡಗಿದಂತೆ ದೇಶದೆಲ್ಲೆಡೆ ಧಾರ್ಮಿಕ ಕೇಂದ್ರಗಳು, ಮಾಲ್, ಹೊಟೇಲ್ ಗಳ ಆರಂಭಕ್ಕೂ ಕೇಂದ್ರ ಸರ್ಕಾರ ಅನುಮತಿ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಕೊರೋನಾ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗಗದುಕೊಳ್ಳುವ ಮೂಲಕವೇ ದೇವಾಲಯ, ಹೊಟೇಲ್, ಮಾಲ್ಗಳನ್ನು ತೆರೆಯಬೇಕು ಎಂದು ಈ ಮಾರ್ಗಸೂಚಿಯಲ್ಲಿ ಕೇಂದ್ರ ಸ್ಪಷ್ಟವಾಗಿ ಹೇಳಿದೆ. ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಮಾಡುವುದನ್ನೂ ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಅಲ್ಲದೆ, ಸಿಬ್ಬಂದಿಗಳು ಮತ್ತು ನಾಗರಿಕರು ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆಯೂ ಕೇಂದ್ರ ಹೊಸದಾಗಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಮಾಹಿತಿ ನೀಡಿದೆ.
ದೇವಾಲಯಗಳಿಗೆ ಸಂಬಂಧಿಸಿದಂತೆ ದೇವರ ಮೂರ್ತಿಗಳನ್ನು ಮುಟ್ಟದಂತೆ, ತೀರ್ಥ, ಪ್ರಸಾದಗಳನ್ನು ವಿತರಣೆ ಮಾಡದಂತೆಯೂ ಕೇಂದ್ರ ಸರ್ಕಾರ ತಿಳಿಸಿದೆ. ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಗ್ಲೌಸ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂಬುದಾಗಿಯೂ ತಿಳಿಸಿದೆ.
ಧಾರ್ಮಿಕ ಕೇಂದ್ರಕ್ಕೆ ಪ್ರವೇಶಿಸುವವರು ಸೋಪು ಬಳಸಿ ಕೈ ಕಾಲುಗಳನ್ನು ಸ್ವಚ್ಛಗೊಳಿಸಬೇಕು, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ, ಮಾಸ್ಕ್ ಧರಿಸುವುದೂ ಕಡ್ಡಾಯ ಎಂಬುದಾಗಿ ಸೂಚಿಸಿದ್ದಾರೆ. ಚಪ್ಪಲಿಗಳನ್ನು ದೇವಾಲಯದ ಹತ್ತಿರ ತರದಂತೆಯೂ ಸೂಚಿಸಿದ್ದಾರೆ. ಭಕ್ತರ ಕ್ಯೂ ನಲ್ಲಿ 6 ಅಡಿ ಅಂತರವನ್ನು ಕಾಪಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ. ಗುಂಪಿನಲ್ಲಿ ಭಜನೆ, ಪ್ರಾರ್ಥನೆ ಮಾಡುವುದನ್ನು ನಿಷೇಧ ಮಾಡಲಾಗಿದೆ. ಜೊತೆಗೆ ಆಗಾಗ ಸ್ವಚ್ಛತೆ ಮಾಡುವ ಮೂಲಕ ಶುಚಿತ್ವಕ್ಕೆ ಪ್ರಾಶಸ್ತ್ಯ ನೀಡಬೇಕು. ಒಳ ಬರಲು ಮತ್ತು ಹೊರ ಹೋಗಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಪ್ರಾರ್ಥನೆಗೆ ಬರುವವರು ಮನೆಯಿಂದಲೇ ಮ್ಯಾಟ್ಗಳನ್ನು ತರುವಂತೆಯೂ ಕೇಂದ್ರ ಸರ್ಕಾರ ತಿಳಿಸಿದೆ.
ಹೊಟೇಲ್ ಮತ್ತು ರೆಸ್ಟೋರೆಂಟ್ಗಳಿಗೆ ಸಂಬಂಧಿಸಿದಂತೆ ಪಾರ್ಸೆಲ್ಗೆ ಹೆಚ್ಚು ಆದ್ಯತೆ ನೀಡುವಂತೆ ಸೂಚನೆ, ಪಾರ್ಸೆಲ್ಗಳನ್ನು ಕೈಗೆ ನೀಡದಂತೆಯೂ ಸೂಚನೆ, ಡೆಲಿವರಿ ಬಾಯ್ಗಳಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ, ರೆಸ್ಟೋರೆಂಟ್ಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ಕಡ್ಡಾಯ, ಸಿಬ್ಬಂದಿಗಳಿಗೆ, ಸರಕುಗಳ ಸಾಗಾಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ದಾರಿ, 50% ಗ್ರಾಹಕರಿಗಷ್ಟೇ ಸೇವೆ ನೀಡಲು ಸೂಚನೆ, ಬಫೆ ಪದ್ದತಿಯಲ್ಲಿ ಸಾಮಾಜಿಕ ಅಂತರ, ಪೇಪರ್ ನ್ಯಾಪ್ಕಿನ್ ಬಳಕೆ, 24 ರಿಂದ 30 ಡಿಗ್ರಿ ಎ. ಸಿ. ತಾಪಮಾನ ಬಳಸಲು ಸೂಚನೆ, ಆಗಾಗ್ಗೆ ಸ್ಯಾನಿಟೈಸ್ ಮಾಡುವುದು, ಅಡುಗೆ ಕೋಣೆಯಲ್ಲಿ ಸ್ಯಾನಿಟೈಸ್, ಸಾಮಾಜಿಕ ಅಃತರ ಕಾಪಾಡಿಕೊಳ್ಳುವುದು ತೀರಾ ಮುಖ್ಯ ಎಂದು ಕೇಂದ್ರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಮಾಲ್ ಗಳ ಆರಂಭಕ್ಕೆ ಸಂಬಂಧಿಸಿದಂತೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನ್ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ನೇಮಕ, ಸಾಮಾಜಿಕ ಅಂತರಕ್ಕೆ ಮಾರ್ಕಿಂಗ್, ಆಗಮನ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ, ಲಿಫ್ಟ್, ಎಸ್ಕಲೇಟರ್ಗಳಲ್ಲಿಯೂ ಅಂತರ, ಆದಷ್ಟು ಕಡಿಮೆ ಗ್ರಾಹಕರಿಗೆ ಏಕ ಕಾಲಕ್ಕೆ ಅವಕಾಶ, ಶುದ್ಧ ಗಾಳಿ ಒಳಬರಲು ವ್ಯವಸ್ಥೆ, 24-30 ರಲ್ಲಿ ಎಸಿ ಬಳಕೆ, ಶುಚಿತ್ವಕ್ಕೆ ಆದ್ಯತೆ, ಬಾಗಿಲುಗಳು, ಲಿಫ್ಟ್ ಬಟನ್, ವಾಷ್ ರೂಂ ವಸ್ತುಗಳನ್ನು ಶುಚಿಗೊಳಿಸಬೇಕು, ಫುಡ್ ಕೋರ್ಟ್ ಗಳಲ್ಲೀ 50% ಗ್ರಾಹಕರಿಗೆ ಮಾತ್ರ ಅವಕಾಶ, ಡಿಜಿಟಲ್ ಪೇಮೆಂಟ್ಗೆ ಆದ್ಯತೆ, ಮಕ್ಕಳ ಗೇಮ್ ಗಳಿಗೆ ಆಸ್ಪದ ನೀಡದಂತೆಯೂ ಕೇಂದ್ರ ನಿಬಂಧನೆ ಹೇರಿದೆ.
ಕಛೇರಿಗಳಿಗೆ ಸಂಬಂಧಿಸಿದಂತೆ, ಸ್ಯಾನಿಟೈಸಿಂಗ್, ಥರ್ಮಲ್ ಸ್ಕ್ತಾನಿಂಗ್ ಕಡ್ಡಾಯ, ಸೋಂಕಿನ ಲಕ್ಷಣಗಳಿಲ್ಲದ ಸಿಬ್ಬಂದಿ, ಸಂದರ್ಶಕರಿಗೆ ಮಾತ್ರ ಒಳಹೋಗಲು ಅವಕಾಶ, ವರ್ಕ್ ಫ್ರಂ ಹೋಂ ಗೆ ಅವಕಾಶ, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಕಛೇರಿ ತೆರೆಯಬಾರದು, ವೃದ್ಧ, ಗರ್ಭಿಣಿ, ಕಾಯಿಲೆ ಇರುವವರಿಗೆ ಪ್ರವೇಶ ನಿಷೇಧ, ಮಾಸ್ಕ್ ಕಡ್ಡಾಯ, ಅಧಿಕಾರಿಗಳ ಭೇಟಿಗೆ ಬರುವವರ ತಪಾಸಣೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ, ಸಾಮಾಜಿಕ ಅಂತರ ಕಡ್ಡಾಯ, ಎಸಿ ತಾಪಮಾನ 24- 30 ಡಿಗ್ರಿ ಗಳಷ್ಟನ್ನು ಮಾತ್ರ ಬಳಕೆ ಮಾಡುವಂತೆಯೂ ಕೇಂದ್ರ ತನ್ನ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.