ನವದೆಹಲಿ: ಗಣಿತದ ಪ್ರತಿಭೆ ಎಂದೇ ಗುರುತಿಸಿಕೊಂಡಿರುವ 19 ವರ್ಷದ ನಿಶ್ಚಲ್ ನಾರಾಯಣಮ್ ದೇಶದ ಅತಿ ಕಿರಿಯ ಚಾರ್ಟೆಡ್ ಅಕೌಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಇತ್ತೀಚಿಗಷ್ಟೇ ಸಿಎ ಪರೀಕ್ಷೆ ಉತ್ತೀರ್ಣನಾಗಿರುವ ನಿಶ್ಚಲ್, ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ದಲ್ಲಿ ಸೇರ್ಪಡೆಯಾಗಲು ಆಗಲು ಇನ್ನೂ ಎರಡು ವರ್ಷಗಳ ಕಾಲ ಕಾಯ ಬೇಕಿದೆ. ಇಲ್ಲಿ ಎಡ್ಮಿಶನ್ ಪಡೆಯಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
ಸಿಎ ಉತ್ತೀರ್ಣನಾಗುವವರೆಗಿನ ಪ್ರಯಾಣ ಸುಲಭದ್ದಾಗಿರಲಿಲ್ಲ. ಆದರೆ ಇದನ್ನು ಸಾಧಿಸಬೇಕೆಂಬ ಸ್ಪಷ್ಟ ಗುರಿ ನನಗಿತ್ತು ಎಂದು ಹೇಳಿಕೊಳ್ಳುವ ನಿಶ್ಚಲ್ಗೆ ಆತನ ತಾಯಿಯೇ ಮೊದಲ ಗುರು.
9ನೇ ವಯಸ್ಸಿನಲ್ಲೇ ಆತನಲ್ಲಿರುವ ಪ್ರತಿಭೆಯನ್ನು ಗುರುತಿಸಿದ್ದ ತಾಯಿ ಪದ್ಮಾವತಿ ಆತನಿಗೆ ಬೇಕಾದ ತರಬೇತಿಯನ್ನು ಕೊಟ್ಟು ದೇಶದ ಅತಿ ಕಿರಿಯ ಸಿಎ ಆಗುವಂತೆ ಮಾಡಿದ್ದಾರೆ.
ದೇಶ, ವಿದೇಶಗಳ ಹಲವಾರು ತಜ್ಞರಿಂದ ಆತ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಿದ್ದಾನೆ, ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಆತ ಅದ್ಭುತ ಜ್ಞಾಪಕ ಶಕ್ತಿ ಹೊಂದಿದ್ದಾನೆ. ಅಲ್ಲದೇ ಸಂಖ್ಯೆಗಳ ಬಗ್ಗೆ ಆತನಿಗೆ ಅತೀವ ಆಸಕ್ತಿ ಇದೆ.
ವರ್ಲ್ಡ್ ಮೆಮೋರಿ ಚಾಂಪಿಯನ್ನಲ್ಲಿ ಅತಿ ಕಿರಿಯ ಚಾಂಪಿಯನ್ ಆಗಿ ಗಿನ್ನಿಸ್ ರೆಕಾರ್ಡ್ ಕೂಡ ಮಾಡಿದ್ದಾನೆ. ‘ವಿಶ್ವದ 7 ಅದ್ಭುತ ಮೆಮೋರಿ’ಗಳಲ್ಲಿ ಈತನೂ ಒಬ್ಬ ಎಂದು ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಗುರುತಿಸಿದೆ. ಒಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಈಗಾಗಲೇ ಬಿ.ಕಾಂ ಮತ್ತು ಎಂ.ಕಾಂ ಪದವಿ ಪಡೆದು, ಅತಿ ಕಿರಿಯ ಪದವೀಧರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.