ನವದೆಹಲಿ: ಐಎನ್ಎಸ್ ಕಳಿಂಗದಲ್ಲಿ ಕ್ಷಿಪಣಿ ಉದ್ಯಾನವನ ‘ಅಗ್ನೀಪ್ರಸ್ಥ’ವನ್ನು ಸ್ಥಾಪನೆ ಮಾಡಲು ಕಮಾಂಡಿಂಗ್ ಆಫೀಸರ್ ಸಿಎಂಡಿ ರಾಜೇಶ್ ದೇಬ್ನಾಥ್ ಅವರು ಮೇ 28ರಂದು ವೈಸ್ ಅಡ್ಮಿರಲ್ ಅತುಲ್ ಕುಮಾರ್ ಜೈನ್- ಪಿವಿಎಸ್ಎಂ, ಎವಿಎಸ್ಎಂ, ವಿಎಸ್ಎಂ, ಎಫ್ಒಸಿ-ಇನ್-ಸಿ (ಪೂರ್ವ) ಉಪಸ್ಥಿತಿಯಲ್ಲಿ ಅಡಿಗಲ್ಲು ಹಾಕಿದ್ದಾರೆ.
ಕ್ಷಿಪಣಿ ಉದ್ಯಾನವನ ಒಂದು ಬಾರಿ ಪೂರ್ಣಗೊಂಡರೆ ಐಎನ್ಎಸ್ ಕಳಿಂಗದ ಎಲ್ಲಾ ಅಧಿಕಾರಿಗಳಿಗೆ, ನಾವಿಕರಿಗೆ, ಬೆಂಬಲ ಸಿಬ್ಬಂದಿಗಳಿಗೆ ಅರ್ಪಣೆಯಾಗಲಿದೆ. 1981 ರಲ್ಲಿ ಸ್ಥಾಪನೆಯಾದಾಗಿನಿಂದ ಇಎನ್ಸಿಯ ಈ ಪ್ರಧಾನ ಆಪ್-ಸಪೋರ್ಟ್ ಬೇಸ್ನಲ್ಲಿ ಐಎನ್ಎಸ್ ಕಳಿಂಗದೊಂದಿಗೆ ಇವರುಗಳು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಉದ್ಯಾನವನವು, 2018-19ನೇ ಸಾಲಿನಲ್ಲಿ ಐಎನ್ಎಸ್ ಕಳಿಂಗಗೆ ದೊರಕಿದ ಪ್ರತಿಷ್ಠಿತ ಘಟಕ ಉಲ್ಲೇಖ ಪ್ರಶಸ್ತಿಯನ್ನೂ ಸ್ಮರಿಸಲಿದೆ.
‘ಅಗ್ನೀಪ್ರಸ್ಥ’ವು 1981 ರಿಂದ ಇಲ್ಲಿಯವರೆಗೆ ಐಎನ್ಎಸ್ ಕಳಿಂಗದ ಕ್ಷಿಪಣಿ ಇತಿಹಾಸದ ದರ್ಶನಗಳನ್ನು ಸೆರೆಹಿಡಿಯುವ ಗುರಿ ಹೊಂದಿದೆ. ಕ್ಷಿಪಣಿ ಉದ್ಯಾನವನವನ್ನು ಕ್ಷಿಪಣಿಗಳು ಮತ್ತು ಗ್ರೌಂಡ್ ಸಪೋರ್ಟ್ ಎಕ್ವಿಪ್ಮೆಂಟ್ (ಜಿಎಸ್ಇ)ಗಳ ಪ್ರತಿಕೃತಿಯೊಂದಿಗೆ ಸ್ಥಾಪಿಸಲಾಗಿದೆ, ಇದು ಘಟಕವು ನಿರ್ವಹಿಸುವ ಕ್ಷಿಪಣಿಗಳ ವಿಕಾಸವನ್ನು ತೋರಿಸುತ್ತದೆ. ಪ್ರದರ್ಶನಗಳನ್ನು ಸ್ಕ್ರ್ಯಾಪ್ / ಬಳಕೆಯಲ್ಲಿಲ್ಲದ ದಾಸ್ತಾನುಗಳಿಂದ ರಚಿಸಲಾಗಿದೆ. ಇದರ ಮುಖ್ಯ ಆಕರ್ಷಣೆಯೆಂದರೆ ಪಿ -70 ‘ಅಮೆಟಿಸ್ಟ್’. 1988-91ರ ಅವಧಿಯಲ್ಲಿ ಐಎನ್ನೊಂದಿಗೆ ಸೇವೆಯಲ್ಲಿದ್ದ ಹಳೆಯ ‘ಚಕ್ರ’ (ಚಾರ್ಲಿ -1 ಜಲಾಂತರ್ಗಾಮಿ) ಶಸ್ತ್ರಾಗಾರದ ನೀರೊಳಗಿನ ಉಡಾವಣಾ ಹಡಗು ವಿರೋಧಿ ಕ್ಷಿಪಣಿಯೇ ಅಮೆಟಿಸ್ಟ್ .
‘ಅಗ್ನೀಪ್ರಸ್ಥ’ ಶಾಲಾ ಮಕ್ಕಳಿಂದ ಹಿಡಿದು ನೌಕಾ ಸಿಬ್ಬಂದಿ ಮತ್ತು ಅವರ ಕುಟುಂಬಗಳವರೆಗೆ ಕ್ಷಿಪಣಿಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡಲಿದೆ. ಪ್ರೇರಣೆ ಮತ್ತು ಉತ್ತೇಜನಕ್ಕಾಗಿ ಒಂದು ನಿಲುಗಡೆ ಕ್ಷೇತ್ರವನ್ನು ಒದಗಿಸಲಿದೆ. ಇದು ಘಟಕದ ಪಾತ್ರದಲ್ಲಿ ಮಾಲೀಕತ್ವ ಮತ್ತು ಹೆಮ್ಮೆಯ ಭಾವನೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.