ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ರಸ್ತೆಯ ಎರಡೂ ಬದಿಗಳಲ್ಲಿ 800 ಕಿಮೀ ವ್ಯಾಪ್ತಿಯವರೆಗೆ ಔಷಧೀಯ ಮತ್ತು ಗಿಡಮೂಲಿಕೆ ಮರಗಳನ್ನು ಹೊಂದಿರುವ ಹರ್ಬಲ್ ಬೆಲ್ಟ್ ಅನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
ಪಿಡಬ್ಲ್ಯುಡಿ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ರಸ್ತೆಗಳ ಬದಿಯಲ್ಲಿ ಅಶ್ವಥ, ಬೇವು, ಸಹಜನ್ ಮುಂತಾದ ಮರಗಳು ಮತ್ತು ಇತರ ಗಿಡಮೂಲಿಕೆಗಳಾದ ಬ್ರಾಹ್ಮಿ, ಅಶ್ವಗಂಧ ಮತ್ತು ಜತ್ರೋಫಗಳನ್ನು ನೆಡಲಾಗುವುದು ಎಂದಿದ್ದಾರೆ.
ಈ ಸಸ್ಯಗಳು ಔಷಧಿಗಳಿಗೆ ಕಚ್ಚಾ ವಸ್ತುಗಳನ್ನು ಒದಗಿಸುತ್ತವೆ ಮತ್ತು ಭೂಮಿಯ ಸವೆತವನ್ನು ತಡೆಯಲು ಸಹಕಾರಿಯಾಗುತ್ತವೆ ಎಂದು ಹೇಳಿದ್ದಾರೆ
ಈ ಯೋಜನೆಯು ಪ್ರದೇಶದ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಜೈವಿಕ ವೈವಿಧ್ಯತೆಯನ್ನು ಉತ್ತೇಜಿಸುವ ಜೊತೆಗೆ ಔಷಧೀಯ ಪ್ರಯೋಜನಗಳನ್ನು ತರುತ್ತದೆ ಎಂದು ಅವರು ಒತ್ತಿ ಹೇಳಿದರು.
ಈ 800 ಕಿಲೋಮೀಟರ್ ರಸ್ತೆಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಹಾದುಹೋಗುತ್ತವೆ ಮತ್ತು ಗಿಡಮೂಲಿಕೆ ಉದ್ಯಾನವು ಮಾಲಿನ್ಯ, ಬ್ಯಾಕ್ಟೀರಿಯಾಗಳಿಂದ ಗಾಳಿಯನ್ನು ಮುಕ್ತವಾಗಿರಿಸುತ್ತದೆ ಮತ್ತು ಇತರ ಕಾಯಿಲೆಗಳನ್ನು ಸಹ ದೂರವಿರಿಸುತ್ತದೆ ಎಂದಿದ್ದಾರೆ.
ಈ ಗಿಡಮೂಲಿಕೆಗಳ ರಸ್ತೆಗಳಲ್ಲಿ ಮಳೆ ನೀರು ಪುನರ್ಭರ್ತಿ ಮಾಡುವ ವ್ಯವಸ್ಥೆಯನ್ನು ಪಿಡಬ್ಲ್ಯುಡಿ ಇಲಾಖೆ ಮಾಡಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.