ನವದೆಹಲಿ: ಅಲ್ ಖೈದಾ ಭಯೋತ್ಪಾದಕ ಮೊಹಮ್ಮದ್ ಇಬ್ರಾಹಿಂ ಜುಬೈರ್, ಅಮೆರಿಕಾದಲ್ಲಿ ಭಯೋತ್ಪಾದಕ ಸಂಘಟನೆಗೆ ಹಣ ಸಂಗ್ರಹಿಸಿದ ಆರೋಪದಲ್ಲಿ ಶಿಕ್ಷೆ ಅನುಭವಿಸಿದ ನಂತರ ಇದೀಗ ಭಾರತಕ್ಕೆ ಗಡೀಪಾರುಗೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಭಾರತಕ್ಕೆ ಗಡಿಪಾರುಗೊಂಡ ಇತರ 167 ಮಂದಿಯೊಂದಿಗೆ ಜುಬೈರ್ನನ್ನು ಕೂಡ ಎರಡು ದಿನಗಳ ಹಿಂದೆ ಗಡೀಪಾರು ಮಾಡಲಾಗಿದೆ ಎಂದು ಗುಪ್ತಚರ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗುಪ್ತಚರ ಅಧಿಕಾರಿಗಳ ಪ್ರಕಾರ, ಗಡಿಪಾರು ಮಾಡಿದವರನ್ನು ಮೇ 19 ರಂದು ಅಮೃತಸರಕ್ಕೆ ವಿಶೇಷ ವಿಮಾನದಲ್ಲಿ ಕರೆತರಲಾಯಿತು. ಅಂದಿನಿಂದ ಭಾರತ ಮೂಲದ 38 ವರ್ಷದ ಜುಬೇರ್ನನ್ನು ಅಮೃತಸರದ ಕೇಂದ್ರವೊಂದರಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜುಬೇರ್ನನ್ನು ಭಾರತಕ್ಕೆ ಗಡೀಪಾರು ಮಾಡಿದ ನಂತರ, ಭಾರತದಲ್ಲಿನ ಭಯೋತ್ಪಾದಕರೊಂದಿಗಿನ ಆತನ ಸಂಪರ್ಕವನ್ನು ಕಂಡುಹಿಡಿಯಲು ಭದ್ರತಾ ಅಧಿಕಾರಿಗಳು ಆತನನ್ನು ತನಿಖೆ ನಡೆಸುತ್ತಿದ್ದಾರೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ದೃಪಡಿಸಿವೆ.
ಗುಪ್ತಚರ ಅಧಿಕಾರಿಗಳ ಪ್ರಕಾರ, ಭಯೋತ್ಪಾದಕ ಹಣಕಾಸು ಆರೋಪದ ಮೇಲೆ ಹೈದರಾಬಾದ್ನ ಎಂಜಿನಿಯರ್ ಜುಬೈರ್ನನ್ನು 2011 ರಲ್ಲಿ ಬಂಧಿಸಲಾಗಿತ್ತು. 2009 ರಲ್ಲಿ ಅಲ್ ಖೈದಾ ನಾಯಕ ಅನ್ವರ್ ಅಲ್-ಅವ್ಲಾಕಿಗೆ ಹಣ ಸಂಗ್ರಹಿಸಿದ್ದಕ್ಕಾಗಿ ಆತನಿಗೆ ಶಿಕ್ಷೆ ವಿಧಿಸಲಾಯಿತು.
ಯುಎಸ್ ನ್ಯಾಯ ಇಲಾಖೆಯ ಪ್ರಕಾರ, ಇರಾಕ್ನಲ್ಲಿ ಯುಎಸ್ ಮಿಲಿಟರಿ ವಿರುದ್ಧ ಹಿಂಸಾತ್ಮಕ ಜಿಹಾದ್ ಅನ್ನು ಬೆಂಬಲಿಸುವ ಪ್ರಯತ್ನದಲ್ಲಿ ಜುಬೇರ್ ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪವಿದೆ.
“ಭಾರತೀಯ ಪ್ರಜೆಯಾದ ಇಬ್ರಾಹಿಂ ಮೊಹಮ್ಮದ್ (ಜುಬೇರ್) 2001 ರಿಂದ 2005 ರವರೆಗೆ ಇಲಿನಾಯ್ಸ್ ವಿಶ್ವವಿದ್ಯಾಲಯದ ಅರ್ಬಾನಾ-ಚಾಂಪೇನ್ನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದ. 2006ರಲ್ಲಿ ಆತ ಓಹಿಯೋದ ಟೊಲೆಡೊಗೆ ತೆರಳಿ ಯುಎಸ್ ಪ್ರಜೆಯನ್ನು ಮದುವೆಯಾದರ. ನಂತರ 2007ರಲ್ಲಿ ಅಲ್ಲಿನ ಕಾನೂನುಬದ್ಧ ಶಾಶ್ವತ ನಿವಾಸಿಯಾದ” ಎಂದು ಯುಎಸ್ ನ್ಯಾಯ ಇಲಾಖೆ 2018 ರಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜುಬೈರ್ ಭಾರತದ ಪ್ರಜೆ ಮತ್ತು ಫಾರೂಕ್ ಮೊಹಮ್ಮದ್ ಆತನ ಸಹೋದರ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
ಯುಎಸ್ ನ್ಯಾಯಾಂಗ ಇಲಾಖೆಯ ಪ್ರಕಾರ, ಜುಬೈರ್ ಭಯೋತ್ಪಾದಕ ಅಪರಾಧಗಳನ್ನು ಎಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಐದು ವರ್ಷಗಳ ಜೈಲು ಶಿಕ್ಷೆ ಕೂಡ ಅನುಭವಿಸಿದ್ದಾನೆ ಮತ್ತು ಅವನ ಸಹೋದರನಿಗೆ 27 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.