ನವದೆಹಲಿ: ಲಾಕ್ಡೌನ್ನಿಂದಾಗಿ ಅನ್ಯ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತೆರಳುವುದಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಮೇ 1 ರಿಂದಲೇ 1,565 ‘ಶ್ರಮಿಕ್’ ವಿಶೇಷ ರೈಲು ಸೇವೆಯನ್ನು ಕಲ್ಪಿಸಿದ್ದು, ಆ ಮೂಲಕ ಈ ವರೆಗೆ ಸುಮಾರು 20 ಲಕ್ಷಕ್ಕೂ ಅಧಿಕ ವಲಸಿಗ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದಾರೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಉತ್ತರ ಪ್ರದೇಶ 837 ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದ್ದರೆ, ಬಿಹಾರ 428 ಮತ್ತು ಮಧ್ಯಪ್ರದೇಶ 100 ಕ್ಕೂ ಹೆಚ್ಚು ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದೆ ಎಂದು ರೈಲ್ವೆ ಸಚಿವ ಪಿಯೂಷ್ ಘೋಯಲ್ ಟ್ವೀಟ್ ಮಾಡಿದ್ದಾರೆ. ಸೋಮವಾರ ರಾತ್ರಿಯ ವೇಳೆಗೆ 162 ರೈಲುಗಳು ಸಃಚಾರ ಆರಂಭಿಸಿದ್ದರೆ, ಸುಮಾರು 1252 ರೈಲುಗಳು ಪ್ರಯಾಣವನ್ನು ಮುಗಿಸಿದ್ದಾಗಿಯೂ ಘೋಯಲ್ ಮಾಹಿತಿ ನೀಡಿದ್ದಾರೆ.
ಸೋಮವಾರ ಗುಜರಾತ್ನಿಂದ 496 ಕ್ಕೂ ಹೆಚ್ಚು ರೈಲುಗಳು ಪ್ರಯಾಣ ಆರಂಭ ಮಾಡಿವೆ. ಮಹಾರಾಷ್ಟ್ರ ದಿಂದ 266 ರೈಲುಗಳು ಸಂಚಾರ ಆರಂಭಿಸಿವೆ. ಪಂಜಾಬ್ನಿಂದ 188, ಕರ್ನಾಟಕದಿಂದ 89, ತಮಿಳುನಾಡಿನಿಂದ 61, ತೆಲಂಗಾಣದಿಂದ 58, ರಾಜಸ್ಥಾನದಿಂದ 54, ಹರಿಯಾಣದಿಂದ 41 ಮತ್ತು ಉತ್ತರಪ್ರದೇಶದಿಂದ 38 ರೈಲುಗಳು ಪ್ರಯಾಣ ಆರಂಭ ಮಾಡಿವೆ.
ಇವೆಲ್ಲದರ ನಡುವೆ ವಲಸಿಗರಿಂದ ಕೇಂದ್ರ ಸರ್ಕಾರ ಹಣ ಕೀಳುತ್ತಿದೆ ಎಂಬ ಆರೋಪ ವಿಪಕ್ಷಗಳಿಂದ ಕೇಳಿ ಬರುತ್ತಿದ್ದು, ಕೆಲವು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳು ಶ್ರಮಿಕ್ ರೈಲುಗಳ ಪ್ರಯಾಣಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಪ್ರಯಾಣ ವೆಚ್ಚದ 85% ವನ್ನು ಕೇಂದ್ರ ಸರಕಾರ ಮತ್ತು 15% ರಾಜ್ಯ ಸರ್ಕಾರಗಳೇ ಭರಿಸುವುದಾಗಿ ಈ ಹಿಂದೆಯೇ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನೂ ನೀಡಿದೆ.
ಇನ್ನು ಈ ರೈಲುಗಳಲ್ಲಿ 1700 ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಜೊತೆಗೆ ಮೂರು ಬಾರಿ ಪ್ರಯಾಣದ ಮಧ್ಯೆ ವಿಶ್ರಾಂತಿಯನ್ನು ನೀಡಲಾಗುತ್ತಿದೆ ಎಂದೂ ಗೋಯಲ್ ಸರಣಿ ಟ್ವೀಟ್ಗಳ ಮೂಲಕ ಮಾಹಿತಿ ನೀಡಿದ್ದಾರೆ.
PM @NarendraModi जी के नेतृत्व में रेलवे द्वारा 20 लाख से अधिक कामगारों को 1,565 श्रमिक स्पेशल ट्रेनों का संचालन कर उनके घर भेजा जा चुका है।
अकेले उत्तर प्रदेश 837, बिहार 428 और मध्यप्रदेश 100 से अधिक ट्रेनों की अनुमति दे चुके है। pic.twitter.com/REUCr0KYEB
— Piyush Goyal (@PiyushGoyal) May 19, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.