ನವದೆಹಲಿ: ಸದಾ ದೇಶವನ್ನು ಉದ್ಧರಿಸುವ ಕಾಯಕದಲ್ಲಿ ನಿರತರಾಗಿರುವ ನಮ್ಮ ರಾಜಕಾರಣಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮುಖ ಪರಿಚಯವೂ ಮರೆತು ಹೋದಂತಿದೆ.
ಇಂದು ಸ್ವಾತಂತ್ರ್ಯ ಸೇನಾನಿ, ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನ. ಇದರ ಅಂಗವಾಗಿ ಫೇಸ್ಬುಕ್ನಲ್ಲಿ ಆಜಾದ್ಗೆ ಗೌರವ ಸಲ್ಲಿಸಲು ಹೋಗಿರುವ ಕಾಂಗ್ರೆಸ್ ಮುಖಂಡ ಅಜೇಯ್ ಮಕೇನ್ ಆಜಾದ್ ಬದಲಿಗೆ ಭಗತ್ ಸಿಂಗ್ ಭಾವಚಿತ್ರವನ್ನು ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ.
ಭಗತ್ ಸಿಂಗ್ ಚಿತ್ರ ಹಾಕಿ ಆಜಾದ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ಹಿರಿಯ ನಾಯಕನಾಗಿ ಇಂತಹ ಪ್ರಮಾದವನ್ನು ಅವರು ಮಾಡಿದ್ದು ರಾಷ್ಟ್ರಭಕ್ತರ ಬಗೆಗೆ ಅವರಿಗಿರುವ ನಿರ್ಲಕ್ಷ್ಯವನ್ನು ತೋರಿಸಿದೆ. ಅಲ್ಲದೇ ಕಾಟಾಚಾರಕ್ಕೆ ಶ್ರದ್ಧಾಂಜಲಿ ಸಮರ್ಪಿಸಿದ್ದು ಎಂಬುದು ಇದರಿಂದಲೇ ತಿಳಿದು ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.