ನವದೆಹಲಿ: ಪಾಕಿಸ್ಥಾನ ಕಾಶ್ಮೀರದಲ್ಲಿ ನಡೆಸುತ್ತಿರುವ ಭಯೋತ್ಪಾದನೆ ಚಟುವಟಿಕೆಯಲ್ಲಿ ತಾಲಿಬಾನ್ ಕೈ ಜೋಡಿಸಬಹುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಾಲೀಬಾನ್, ಈ ವಿಷಯವನ್ನು ಅಲ್ಲಗಳೆದಿದ್ದು, ಅದು ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಘಜ್ವಾ ಇ ಹಿಂದ್ ಅನ್ನು ಬೆಂಬಲಿಸಲಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಈ ಬಗ್ಗೆ ಟ್ವೀಟ್ ಮೂಲಕ ಹೇಳಿಕೆ ನೀಡಿರುವ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ವಕ್ತಾರ ಸುಹೇಲ್ ಶಾಹಿನ್, ಇಸ್ಲಾಮಿಕ್ ಎಮಿರೇಟ್ಸ್ನ ಕಾನೂನು ಇತರ ದೇಶಗಳ ಆಂತರಿಕ ವಿಚಾರಗಳ ಬಗ್ಗೆ ಹಸ್ತಕ್ಷೇಪ ಮಾಡುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಕಾಶ್ಮೀರದಲ್ಲಿ ಜಿಹಾದಿಗಳಲ್ಲಿ ತಾಲೀಬಾನ್ ಕೈಜೋಡಿಸುತ್ತದೆ ಎಂಬ ಮಾಧ್ಯಮಗಳಲ್ಲಿ ಪ್ರಕಟವಾದ ವಿಚಾರಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ತಾಲಿಬಾನ್ನ ವಕ್ತಾರ ಜಬೀಹುಲ್ಲಾ ಮುಜಾಹಿದ್ ನೀಡಿದ್ದಾರೆ ಎನ್ನಲಾದ “ಕಾಶ್ಮೀರದ ವಿವಾದ ಬಗೆಹರಿಯದ ಹೊರತು ಭಾರತದೊಂದಿಗೆ ಗೆಳೆತನ ಬೆಳೆಸುವುದು ಸಾಧ್ಯವಿಲ್ಲ. ಕಾಬೂಲ್ನಲ್ಲಿ ಅಧಿಕಾರ ವಶಕ್ಕೆ ಪಡೆದುಕೊಂಡು ನಂತರ ಕಾಶ್ಮೀರವನ್ನು ನಾಸ್ತಿಕರಿಂದಲೂ ವಶಪಡಿಸಿಕೊಳ್ಳಲಾಗುತ್ತದೆ” ಎಂಬ ಹೇಳಿಕೆಗೆ ಸ್ಪಷ್ಟೀಕರಣ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಇದೀಗ ಶಾಹಿನ್ ಅವರು ತಾಲೀಬಾನ್ ನಿಂದ ಭಾರತದ ಪರವಾಗಿ ಪ್ರಬಲ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಕಳೆದ 40 ವರ್ಷಗಳಿಂದ ತಾಲೀಬಾನ್ ವಿಚಾರದಲ್ಲಿ ಭಾರತ ನಕಾರಾತ್ಮಕ ನಡೆ ಪ್ರದರ್ಶಿಸುತ್ತಿದೆ ಎಂಬ ತಾಲಿಬಾನ್ ರಾಜಕೀಯ ಕಛೇರಿಯ ಅಬ್ಬಾಸ್ ಸ್ಟಾನೆಕ್ಜೈ ಹೇಳಿಕೆಯನ್ನು ತಿರಸ್ಕರಿಸಿ, ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಗ್ರ್ಯಾನ್ ಹೆವಾದ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಅಫ್ಘನಿಸ್ಥಾನದ ಸಂಬಂಧ ಗೌರವಪೂರ್ಣವಾಗಿದೆ. ಅಲ್ಲದೆ, ಅಫ್ಘಾನಿಸ್ತಾನದಲ್ಲಿನ ಶಾಂತಿ ಮತ್ತು ಸಾಮರಸ್ಯದ ವಿಚಾರದಲ್ಲಿಯೂ ಭಾರತದ ಪಾಲಿದೆ. ಅಲ್ಲದೆ ಅಫ್ಘಾನಿಸ್ತಾನ ಒಡೆತನ, ನಿಯಂತ್ರಣ, ನೇತೃತ್ವದ ಎಲ್ಲಾ ಪ್ರದೇಶಗಳು ಶಾಂತಿ ಮತ್ತು ಸಾಮರಸ್ಯಕ್ಕೆ ಹೆಚ್ಚು ಆಧ್ಯತೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.