ನವದೆಹಲಿ: ಆಯುರ್ವೇದ ಮೂಲಿಕೆಯಾದ ಅಶ್ವಗಂಧದ ಗುಣಲಕ್ಷಣಗಳು COVID-19 ಸೋಂಕಿಗೆ ಚಿಕಿತ್ಸೆ ನೀಡುವಂತಹ ಮತ್ತು ಸೋಂಕನ್ನು ತಡೆಗಟ್ಟುವಂತಹ ಮೌಲ್ಯವನ್ನು ಹೊಂದಿವೆ ಎಂಬುದನ್ನು ಐಐಟಿ-ದೆಹಲಿಯ ಸಂಶೋಧಕರು ಜಪಾನ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಐಎಸ್ಟಿ) ಸಹಯೋಗದೊಂದಿಗೆ ಕಂಡುಕೊಂಡಿದ್ದಾರೆ.
DAILAB (ಡಿಬಿಟಿ-ಎಐಎಸ್ಟಿ ಇಂಟರ್ನ್ಯಾಷನಲ್ ಲ್ಯಾಬೊರೇಟರಿ ಫಾರ್ ಅಡ್ವಾನ್ಸ್ಡ್ ಬಯೋಮೆಡಿಸಿನ್) ನ ಪ್ರೊಫೆಸರ್ ಡಿ. ಸುಂದರ್ ನೇತೃತ್ವದ ಸಂಶೋಧಕರ ಈ ಅಧ್ಯಯನವು ಜರ್ನಲ್ ಆಫ್ ಬಯೋಮೋಲಿಕ್ಯುಲರ್ ಸ್ಟ್ರಕ್ಚರ್ ಮತ್ತು ಡೈನಾಮಿಕ್ಸ್ನಲ್ಲಿ ಪ್ರಕಟಗೊಳ್ಳಲು ಅಂಗೀಕಾರವನ್ನು ಪಡೆದುಕೊಂಡಿದೆ ಮತ್ತು ಶೀಘ್ರದಲ್ಲೇ ಪ್ರಕಟಗೊಳ್ಳುವ ಸಾಧ್ಯತೆಯಿದೆ.
“SARS-CoV-2 ವೈರಸ್ ಜೀನೋಮ್ ಮತ್ತು ಸ್ಟ್ರಕ್ಚರ್ ಇತ್ತೀಚೆಗೆ ವಿಶ್ವಾದ್ಯಂತ ಮಾಹಿತಿ ಮತ್ತು ಪ್ರಾಯೋಗಿಕ ಸಾಧನಗಳನ್ನು ಬಳಸಿಕೊಂಡು ಔಷಧ ವಿನ್ಯಾಸ, ಯೋಜನೆ ಮತ್ತು ಅಭಿವೃದ್ಧಿಯನ್ನು ಪ್ರಚೋದಿಸುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಅಶ್ವಗಂಧ ಮತ್ತು ಪ್ರೋಪೋಲಿಸ್ನ ನೈಸರ್ಗಿಕ ಸಂಯುಕ್ತಗಳ ಮೇಲೆ ಕೆಲಸ ಮಾಡುತ್ತಿರುವ ಡೈಲಾಬ್ ಮತ್ತು ಎಐಎಸ್ಟಿ ಜಪಾನ್, ತಮ್ಮ ಕೆಲವು ಜೈವಿಕ-ಸಕ್ರಿಯಗಳು SARS-CoV-2 ನೊಂದಿಗೆ ಇಂಟೆರ್ಯಾಕ್ಟ್ ನಡೆಸುವ ಸಾಧ್ಯತೆಯನ್ನು ಪರಿಶೋಧಿಸಿದ್ದಾರೆ ”ಎಂದು ಐಐಟಿ-ಡಿ ಹೇಳಿಕೆಯಲ್ಲಿ ತಿಳಿಸಿದೆ.
ಐಐಟಿ-ಡಿ ತಂಡವು “ಅಶ್ವಗಂಧ ಮತ್ತು ಪ್ರೋಪೋಲಿಸ್ನ ನೈಸರ್ಗಿಕ ಸಂಯುಕ್ತಗಳು ಪರಿಣಾಮಕಾರಿ COVID-19 ಔಷಧಿಗಳಾಗುವ ಸಾಮರ್ಥ್ಯವನ್ನು ಹೊಂದಿವೆ” ಎಂದು ವರದಿ ಮಾಡಿವೆ.
ಸುಂದರ್ ಅವರು ಪ್ರಕಾರ, “ಅಶ್ವಗಂಧದ ಪ್ರತಿರಕ್ಷೆಯನ್ನು ಹೆಚ್ಚಿಸುವ ಖ್ಯಾತಿಯು SARS-CoV-2 ಮತ್ತು ಕೋವಿಡ್ -19 ಕಾಯಿಲೆಗೆ ಸಂಬಂಧಿಸಿದ ಕ್ಲಿನಿಕಲ್ ಸಂಶೋಧನಾ ಅಧ್ಯಯನಗಳನ್ನು ಪ್ರಾರಂಭಿಸಲು ಅಂತರಶಿಸ್ತಿನ ಕಾರ್ಯಪಡೆ ರಚಿಸುವ ಭಾರತ ಸರ್ಕಾರದ ಇತ್ತೀಚಿನ ಉಪಕ್ರಮದ ಆಧಾರವಾಗಿದೆ. ಈ ತಂಡದ ಪ್ರಸ್ತುತ ಸಂಶೋಧನಾ ವರದಿಯು ಅದರ ನೇರ ಯ್ಯಾಂಟಿ-ವೈರಲ್ ಚಟುವಟಿಕೆಗಳ ಬಗ್ಗೆ ಸುಳಿವು ನೀಡುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.