ನವದೆಹಲಿ: ಕೊರೋನಾ ಸಂಕಷ್ಟದಿಂದ ತಮ್ಮ ತಮ್ಮ ಸೂರುಗಳಿಗೆ, ಸ್ವಂತ ಊರುಗಳಿಗೆ ತೆರಳಲಾಗದೆ ಪರಿತಪಿಸುತ್ತಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಸಲುವಾಗಿ ಕೇಂದ್ರ ಸರ್ಕಾರ ‘ಶ್ರಮಿಕ್’ ವಿಶೇಷ ರೈಲು ಸೇವೆಗಳನ್ನು ದೇಶದಾದ್ಯಂತ ಆರಂಭಿಸಿತ್ತು. ರೈಲ್ವೆ ಸಚಿವ ಪಿಯುಷ್ ಘೋಯಲ್ ನೇತೃತ್ವದಲ್ಲಿ ಭಾರತೀಯ ರೈಲ್ವೆ ಈವರೆಗೆ 1047 ಶ್ರಮಿಕ್ ರೈಲುಗಳ ಸಂಚಾರ ವ್ಯವಸ್ಥೆ ಮಾಡಿದ್ದು, ಸುಮಾರು 1.4 ದಶಲಕ್ಷಕ್ಕೂ ಅಧಿಕ ವಲಸಿಗರನ್ನು ಅವರವರ ರಾಜ್ಯಕ್ಕೆ ತಲುಪಿಸುವ ಕೆಲಸವನ್ನು ಮಾಡಿದೆ.
ಕೇವಲ ಕಳೆದ ಮೂರು ದಿನಗಳಲ್ಲಿ ಭಾರತೀಯ ರೈಲ್ವೆ 2 ಲಕ್ಷಕ್ಕೂ ಅಧಿಕ ವಲಸಿಗರನ್ನು ಅವರವರ ರಾಜ್ಯಗಳಿಗೆ ತಲುಪಿಸುವ ಕೆಲಸವನ್ನು ಮಾಡಿದೆ. ಆ ಮೂಲಕ ಕೊರೋನಾ ಲಾಕ್ಡೌನ್ನಿಂದಾಗಿ ಸಿಕ್ಕಿಬಿದ್ದಿದ್ದ ವಲಸಿಗ ಕಾರ್ಮಿಕರನ್ನು ಅವರವರ ರಾಜ್ಯಕ್ಕೆ ತೆರಳಲು ಸಹಾಯ ಮಾಡುವಲ್ಲಿ ರೈಲ್ವೆ ಇಲಾಖೆ ನಿರ್ಣಾಯಕ ಪಾತ್ರ ವಹಿಸಿದೆ. ಎಲ್ಲಾ ರೀತಿಯ ಸಾರಿಗೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ವಲಸೆ ಕಾರ್ಮಿಕರ ನೋವಿಗೆ ಸ್ಪಂದಿಸಿದೆ ಎಂದರೂ ತಪ್ಪಾಗಲಾರದು. ಕೇಂದ್ರ 85% ಮತ್ತು ರಾಜ್ಯ ಸರ್ಕಾರಗಳು 15% ರೈಲ್ವೆ ವೆಚ್ಚವನ್ನು ಭರಿಸುವ ಮೂಲಕ ವಲಸಿಗ ಕಾರ್ಮಿಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ.
ಇದಲ್ಲದೆ, ಮೇ 12 ರಿಂದ ತೊಡಗಿದಂತೆ 15 ಅಂತರರಾಜ್ಯ ಪ್ಯಾಸೆಂಜರ್ ರೈಲು ಸೇವೆಗಳನ್ನು ಸಹ ಆರಂಭ ಮಾಡಿದೆ. ಆ ಮೂಲಕವೂ ಜನರಿಗೆ ಸ್ವಸ್ಥಾನಗಳಿಗೆ ತೆರಳುವುದಕ್ಕೆ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಸಹಾಯವನ್ನು ಒದಗಿಸಿಕೊಟ್ಟಿದೆ. ಅಲ್ಲದೆ, ಲಾಕ್ಡೌನ್ ನಂತರದಲ್ಲಿ ಈವರೆಗೆ ಸರಕು ಸಾಗಾಟ, ಕೊರೋನಾ ಐಸೋಲೇಷನ್ ವಾರ್ಡ್ಗಳಾಗಿ, ಆಹಾರ, ನೀರು, ಅಗತ್ಯ ಪಿಪಿಇಗಳನ್ನು ಒದಗಿಸಿಖೊಡುವ ಮೂಲಕವೂ ರೈಲ್ವೆ ಇಲಾಖೆ ಜನಸ್ನೇಹಿ ಕಾರ್ಯಗಳನ್ನು ಮಾಡಿದೆ. ಆ ಮೂಲಕ ಕೊರೋನಾ ಸಂಕಷ್ಟದಲ್ಲಿದ್ದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಕೈ ಜೋಡಿಸುವ ಮಾದರಿ ಕಾರ್ಯ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.