ನವದೆಹಲಿ: ಭಾರತ ಸರ್ಕಾರದ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆ ‘ಅಟಲ್ ಪಿಂಚಣಿ ಯೋಜನೆ’ (ಎಪಿವೈ) ಐದು ವರ್ಷಗಳ ಯಶಸ್ವಿ ಅನುಷ್ಠಾನವನ್ನು ಪೂರ್ಣಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2015 ರ ಮೇ 9 ರಂದು ವೃದ್ಧಾಪ್ಯದ ಆದಾಯದ ಭದ್ರತೆಯನ್ನು ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಿಗೆ ತಲುಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದರು ಮತ್ತು 60 ವರ್ಷ ವಯಸ್ಸಿನ ನಂತರ ಸರ್ಕಾರವು ಕನಿಷ್ಠ ಪಿಂಚಣಿ ಖಾತರಿಯನ್ನು ಈ ಯೋಜನೆಯಡಿ ನೀಡುತ್ತದೆ.
2.23 ಕೋಟಿ ನೋಂದಣಿಯನ್ನು ಗಳಿಸಿದ ನಂತರವೂ ಭಾರತದ ವೇಗವಾಗಿ ಬೆಳೆಯುತ್ತಿರುವ ಯೋಜನೆಯಾಗಿ ಗುರುತಿಸಿಕೊಂಡಿದೆ. ವಯಸ್ಸಾದ ಕಾರ್ಮಿಕರ ಸವಾಲುಗಳನ್ನು ಎದುರಿಸಲು ಪಿಂಚಣಿ ಯೋಜನೆ ಮಹತ್ವದ್ದಾಗಿದೆ.
ಗಮನಾರ್ಹ ದಾಖಲಾತಿಗಳ ಹೊರತಾಗಿಯೂ, ಈ ಯೋಜನೆಯನ್ನು ದೇಶದಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪುರುಷ ಮತ್ತು ಸ್ತ್ರೀ ನೋಂದಣಿ ಅನುಪಾತ 57:43 ರೊಂದಿಗೆ ಸಮಗ್ರವಾಗಿ ಜಾರಿಗೆ ತರಲಾಗಿದೆ.
ಈ ಐದು ವರ್ಷಗಳಲ್ಲಿ ಎಪಿವೈ ನಡೆದು ಬಂದ ದಾರಿ ಅದ್ಭುತವಾಗಿದೆ ಮತ್ತು 2020 ರ ಮೇ 9 ರ ಹೊತ್ತಿಗೆ, ಯೋಜನೆಯಡಿಯಲ್ಲಿ ಒಟ್ಟು 2,23,54,028 ದಾಖಲೆ ಆಗಿದೆ. ಪ್ರಾರಂಭವಾದ ಮೊದಲ ಎರಡು ವರ್ಷಗಳಲ್ಲಿ, ಸುಮಾರು 50 ಲಕ್ಷ ಜನರನ್ನು ದಾಖಲಿಸಲಾಗಿದ್ದು, ಇದು ಮೂರನೇ ವರ್ಷದಲ್ಲಿ 100 ಲಕ್ಷಕ್ಕೆ ದ್ವಿಗುಣಗೊಂಡಿದೆ ಮತ್ತು 4 ನೇ ವರ್ಷದಲ್ಲಿ 1.50 ಕೋಟಿ ಮೈಲಿಗಲ್ಲು ಸಾಧಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 70 ಲಕ್ಷ ಜನರನ್ನು ಈ ಯೋಜನೆಯಡಿ ದಾಖಲಿಸಲಾಗಿತ್ತು.
ಬ್ಯಾಂಕ್ ಖಾತೆಯನ್ನು ಹೊಂದಿರುವ 18-40 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆಯಿಂದ ಎಪಿವೈ ಚಂದಾದಾರರಾಗಬಹುದು ಮತ್ತು ಅದರ ವಿಶಿಷ್ಟತೆಯು ಮೂರು ವಿಶಿಷ್ಟ ಪ್ರಯೋಜನಗಳಿಗೆ ಕಾರಣವಾಗಿದೆ. ಮೊದಲನೆಯದಾಗಿ, ಇದು 60 ವರ್ಷ ದಾಟಿದ ಮೇಲೆ ಕನಿಷ್ಠ 1000 ರಿಂದ 5000 ರೂ.ವರೆಗಿನ ಕನಿಷ್ಠ ಖಾತರಿಯ ಪಿಂಚಣಿಯನ್ನು ಒದಗಿಸುತ್ತದೆ, ಎರಡನೆಯದಾಗಿ ಚಂದಾದಾರರ ಸಾವಿನ ನಂತರ ಸಂಗಾತಿಗೆ ಜೀವಿತಾವಧಿಯಲ್ಲಿ ಪಿಂಚಣಿ ಮೊತ್ತವನ್ನು ಖಾತರಿಪಡಿಸಲಾಗುತ್ತದೆ ಮತ್ತು ಕೊನೆಯದಾಗಿ, ಎರಡೂ ಜನರ ಸಾವಿನ ಸಂದರ್ಭದಲ್ಲಿ ಸಂಪೂರ್ಣ ಪಿಂಚಣಿ ಕಾರ್ಪಸ್ ಅನ್ನು ನಾಮಿನಿಗೆ ಪಾವತಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.