News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಮಾಯಣದ ಬಳಿಕ ಭಗವದ್ಗೀತೆ ಬಗ್ಗೆ ವೆಬ್‌ನಾರ್ ಆಯೋಜಿಸಲು ಸಜ್ಜಾಗಿದೆ ಜೆಎನ್‌ಯು

ನವದೆಹಲಿ: ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯ (ಜೆಎನ್‌ಯು) ಮೇ 7 ರಂದು ಭಗವದ್ಗೀತೆಯ ಬಗ್ಗೆ ವೆಬ್‌ನಾರ್ ಅನ್ನು ಆಯೋಜನೆಗೊಳಿಸಲು ಸಜ್ಜಾಗಿದೆ. ಮೇ 7 ರಂದು ಇದು ಜರುಗಲಿದೆ.

ಜೆಎನ್‌ಯು ವಿಶ್ವವಿದ್ಯಾಲಯದ ಉಪಕುಲಪತಿ ಮಮಿಡಾಲ ಜಗದೀಶ್ ಕುಮಾರ್ ಅವರು ಸೋಮವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

“ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಗವದ್ಗೀತೆಯ ಪಾಠಗಳು” ಎಂಬ ವಿಷಯದ ಮೇಲೆ ವೆಬ್‌ನಾರ್ ಜರುಗಲಿದೆ. ಇದಕ್ಕೆ ತಮಗೆಲ್ಲರಿಗೂ ಜೆಎನ್‌ಯು ಸ್ವಾಗತ ಕೋರುತ್ತದೆ. ಯುಎಸ್ಎ ಒಕ್ಲಹೊಮ ಸ್ಟೇಟ್ ಯುನಿವರ್ಸಿಟಿಯ ಪ್ರೊಫೆಸರ್ ಸುಭಾಷ್ ಕಕ್ ಇದನ್ನು ನಡೆಸಿಕೊಡಲಿದ್ದಾರೆ. 2018 ರಿಂದ ಇವರು ಪ್ರಧಾನ ಮಂತ್ರಿಗಳ ವಿಜ್ಞಾನ, ತಂತ್ರಜ್ಞಾನ ಮತ್ತು ಇನ್ನೋವೇಶನ್ ಅಡ್ವೈಸರಿ ಕೌನ್ಸಿಲ್ ಸದಸ್ಯರಾಗಿದ್ದಾರೆ. 2019 ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ ಎಂದು ಉಪಕುಲಪತಿಗಳು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇತ್ತೀಚಿನ ಇತಿಹಾಸ ಮತ್ತು ಮಾನವ ಸ್ಪಂದನೆಗಳ ಕಾರ್ಯತಂತ್ರಗಳ ಬಗ್ಗೆ ಆಳವಾದ ಅರ್ಥವನ್ನು ಮಾಡಿಕೊಳ್ಳುವ ಸಲುವಾಗಿ ಭಗವದ್ಗೀತೆಯ ಪಾತ್ರವನ್ನು ಅವಲೋಕಿಸುವ ಸಲುವಾಗಿ ವೆಬ್‌ನಾರ್ ಅನ್ನು ಆಯೋಜನೆಗೊಳಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top