ರಾಜಮುಂಡ್ರಿ: 144 ವರ್ಷಗಳಿಗೊಮ್ಮೆ ನಡೆಯುವ ಗೋದಾವರಿ ಪುಷ್ಕರಂ ಮೇಳದ ಸಂದರ್ಭ ಮೇಳ ನಡೆಯಲಿರುವ ಘಾಟ್ಗಳಲ್ಲಿ ಭಿಕ್ಷುಕರು ಭಿಕ್ಷಾಟನೆ ನಡೆಸದಂತೆ ತಡೆಯಲು ಆಂಧ್ರ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಅದೆಂದರೆ ಭಿಕ್ಷುಕರಿಗೆ 5,000 ರೂ.ಗಳನ್ನು ನೀಡುವುದು !
ಪುಷ್ಕರಂ ಸಂದರ್ಭ ಭಿಕ್ಷಾಟನೆ ನಡೆಸದಂತೆ ಭಿಕ್ಷುಕರಿಗೆ ಸೂಚಿಸಲಾಗಿದೆ. ಈ ಸಂದರ್ಭ ಭಿಕ್ಷುಕರಿಗೆ ಆಗುವ ತೊಂದರೆ ನಿವಾರಿಸಲು ಸರ್ಕಾರ 5000 ಸಾವಿರ ರೂ. ಕೊಡುಗೆ ನೀಡುವುದಾಗಿ ಘೋಷಿಸಿದೆ. ಜು. 25 ರ ವರೆಗೆ ನಡೆಯಲಿರುವ ದಕ್ಷಿಣ ಕುಂಭ ಮೇಳದ ಸಂದರ್ಭ ಭಿಕ್ಷುಕರನ್ನು ನಿಷೇಧಿಸಲಾಗಿದ್ದು, ಅವರಿಗೆ ಉಚಿತ ಊಟ ನೀಡುವುದಾಗಿಯೂ ಜಿಲ್ಲಾಡಳಿತ ಸೂಚಿಸಿದೆ.
ಜುಲೈ 14 ರಂದು ಉತ್ಸವ ಆರಂಭಗೊಂಡಿದ್ದು, ಪುಷ್ಕರಂ ಘಾಟ್ನ 17 ಘಾಟ್ಗಳಲ್ಲಿ 1000 ಕ್ಕೂ ಹೆಚ್ಚು ಭಿಕ್ಷುಕರಿರುವ ಬಗ್ಗೆ ತಿಳಿದು ಬಂದಿದೆ. ಈ ಯೋಜನೆಯಿಂದಾಗಿ ಉಚಿತ ಊಟ, ಹಣ ಪಡೆಯಲು ಇನ್ನಿತರರೂ ಭಿಕ್ಷುಕರಂತೆ ಸಾಲುಗಟ್ಟಿ ನಿಂತಿರುವುದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.