ತೆಲಂಗಾಣ: ದೇಶದೆಲ್ಲೆಡೆ ಕೋವಿಡ್-19 ಮಹಾಮಾರಿಯ ಕಾಟಕ್ಕೆ ಇಡೀ ದೇಶವೇ ತತ್ತರಿಸಿದೆ. ತೆಲಂಗಾಣದಲ್ಲಿ ಸುಮಾರು 700 ಕೊರೋನಾ ರೋಗಿಗಳು ಪತ್ತೆಯಾಗಿದ್ದು, ಅವುಗಳಲ್ಲಿ 640 ಪ್ರಕರಣಗಳಿಗೆ ದೆಹಲಿ ನಿಜಾಮುದ್ದೀನ್ ಜಮಾತ್ನಲ್ಲಿ ನಡೆದ ತಬ್ಲಿಘಿ ನಂಟಿರುವುದು ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ಆರೋಗ ಸಚಿವರು ಮಾಹಿತಿ ನೀಡಿದ್ದಾರೆ.
ಸುಮಾರು 640 ಪ್ರಕರಣಗಳಲ್ಲಿ ತಬ್ಲಿಘಿ ಸಮಾವೇಶದಲ್ಲಿ ಭಾಗಿಗಳಾದವರಿಂದಲೇ ಇತರರಿಗೂ ಸೋಂಕು ಹರಡಿರುವುದಾಗಿ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಹಳೆಯ ಹೈದರಾಬಾದ್ ಪ್ರಾಂತದಲ್ಲಿ ಸಮಾವೇಶದಲ್ಲಿ ಭಾಗಿಗಳಾದ 20 ಮಂದಿಗೆ ಸೋಂಕು ತಗುಲಿದ್ದು, ಅವರಿಂದ ಅವರ ಕುಟುಂಬ ಸದಸ್ಯರು ಸೇರಿದಂತೆ 81 ಕ್ಕೂ ಅಧಿಕ ಮಂದಿಗೆ ಸೋಂಕು ಹಬ್ಬಿದೆ. ಅಲ್ಲದೆ ಸೂರ್ಯಪೇಟೆಯಲ್ಲಿ ಒಂದೇ ಕುಟುಂಬದ 11 ಮಂದಿಗೆ ಕೊರೋನಾ ಪಾಸಿಟಿವ್ ಇರುವುದು ಕಂಡುಬಂದಿದೆ.
ಇನ್ನು ಹೈದರಾಬಾದ್ನಲ್ಲಿ ಸೋಂಕು ಹೆಚ್ಚು ಪ್ರಮಾಣದಲ್ಲಿ ಹರಡಲು ತಬ್ಲಿಘಿ ಸಮಾವೇಶಕ್ಕೆ ತೆರಳಿದವರೇ ಕಾರಣ. ಇವರುಗಳು ಈ ಪ್ರದೇಶದ ಸಣ್ಣ ಸಣ್ಣ ಮನೆಗಳಲ್ಲಿ ವಾಸ್ತವ್ಯವಿದ್ದು ಅಲ್ಲಿ ಹೆಚ್ಚಿನ ಜನರಿಗೆ ಸೌಂಕು ಹರಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸಮಾವೇಶಕ್ಕೆ ಹೋಗಿ ಬಂದವರಲ್ಲಿ ಕೆಲವರು ಮತ್ತು ಅವರ ಸಂಪರ್ಕಕ್ಕೆ ಬಂದ ಕೆಲವರು ಇನ್ನೂ ತಪಾಸಣೆಗೆ ಒಳಪಡದೇ ಇರುವುದರಿಂದ ಸೋಂಕು ಮತ್ತಷ್ಟು ಹಬ್ಬಿದೆ ಎಂದು ತಿಳಿಸಿದ್ದಾರೆ.
ಇನ್ನು ವಿದೇಶದಿಂದ ಆಗಮಿಸಿದವರ ಕ್ವಾರಂಟೈನ್ ಅವಧಿಗಿಂತ ತಬ್ಲಿಘಿಗಳ ಕ್ವಾರಂಟೈನ್ ಅವಧಿಯನ್ನು ಹೆಚ್ಚಿಸಲಾಗಿದೆ. ಎಪ್ರಿಲ್ 21 ರಂದು ವಿದೇಶದಿಂದ ಕ್ವಾರಂಟೈನ್ ಅವಧಿ ಮುಕ್ತಾಯವಾಗುತ್ತದೆ. ತಬ್ಲಿಘಿ ಸದಸ್ಯರ ಕ್ವಾರಂಟೈನ್ ಅವಧಿ ಎಪ್ರಿಲ್ 28 ರಂದು ಮುಗಿಯುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಈ ವರೆಗೆ 10,000 ಮಂದಿಯ ಕೊರೋನಾ ಟೆಸ್ಟ್ ಮಾಡಲಾಗಿದೆ. ರಾಜ್ಯದ ಏಳು ಲ್ಯಾಬ್ಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರ ತಮ್ಮ ಕೆಲಸವನ್ನು ದ್ವಿಗುಣ ಮಾಡಲಿದೆ. ಅಲ್ಲದೆ ಇನ್ನೂ ಎರಡು ಲ್ಯಾಬ್ಗಳಲ್ಲಿ ಟೆಸ್ಟ್ ನಡೆಸಲು ಅನುಮತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಮೂರು ವಾರಗಳಲ್ಲಿಯೇ ಸ್ವಯಂಚಾಲಿತ ಟೆಸ್ಟಿಂಗ್ ಯಂತ್ರಗಳು ಬರಲಿದೆ. ಅವುಗಳ ಮೂಲಕ ದಿನಕ್ಕೆ 5000 ಮಂದಿಗೆ ಟೆಸ್ಟ್ ನಡೆಸಲಾಗುವುದಾಗಿಯೂ ಅವರು ಹೇಳಿಕೆ ನೀಡಿದ್ದಾರೆ.
ಗಾಂಧಿ ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಹೈದರಾಬಾದ್ನ ಗಚಿಬೌಲಿ ಕ್ರೀಡಾಂಗಣದಲ್ಲಿ ಕೋವಿಡ್ ಚಿಕಿತ್ಸೆಗೆ 1,700 ಹಾಸಿಗೆಗಳ ಹೊಸ ಆಸ್ಪತ್ರೆ ಎಪ್ರಿಲ್ 20 ರಿಂದ ಕಾರ್ಯ ನಿರ್ವಹಿಸಲಾರಂಭಿಸಲಿರುವ ಬಗ್ಗೆಯೂ ಅವರು ಈ ಸಂದರ್ಭ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.