ನವದೆಹಲಿ: ಗುಜರಾತ್ನ ಅಹಮದಾಬಾದ್ನ ಆಸ್ಪತ್ರೆಯೊಂದರಲ್ಲಿ ಧರ್ಮದ ಆಧಾರದಲ್ಲಿ ಕೊರೋನಾ ಸೋಂಕಿತರನ್ನು ಬೇರ್ಪಡಿಸಲಾಗುತ್ತಿದೆ ಎಂಬ ವರದಿಯನ್ನಿಟ್ಟುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಟೀಕಿಸಿದ ಯುಎಸ್ನ ಕಮಿಷನ್ ಆಫ್ ಇಂಟರ್ನ್ಯಾಷನಲ್ ರಿಲೀಜಿಯಸ್ ಫ್ರೀಡಂನ ನಡೆಯನ್ನು ಭಾರತ ಖಂಡಿಸಿದೆ.
ಅಹಮದಬಾದ್ ನ ಆಸ್ಪತ್ರೆಯಲ್ಲಿ ರೋಗಿಗಳನ್ನು ಧರ್ಮದ ಆಧಾರದಲ್ಲಿ ಬೇರ್ಪಡಿಸಿ ಚಿಕಿತ್ಸೆ ನೀಡುತ್ತಿರುವ ವರದಿ ಪ್ರಕಟವಾಗಿದ್ದು, ಅದರ ಆಧಾರದಲ್ಲಿ ಯುಎಸ್ ಕಳವಳ ವ್ಯಕ್ತ ಪಡಿಸಿತ್ತು. ಆದರೆ ಈ ಮಾಹಿತಿ ತಪ್ಪಾಗಿದ್ದು, ಸೋಂಕಿತರಿಗೆ ಧರ್ಮದ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. USCIRF ಈಗ ಭಾರತದಲ್ಲಿ ಕೊರೋನಾ ಸೋಂಕಿತರಿಗೆ ನೀಡುತ್ತಿರುವ ವೈದ್ಯಕೀಯ ಚಿಕಿತ್ಸೆಯ ಕುರಿತಂತೆ ತಪ್ಪು ಮಾಹಿತಿಗಳನ್ನು ಹರಡಲಾರಂಭಿಸಿದೆ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಭಾರತ ಧರ್ಮಾತೀತವಾಗಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದೆ. ಆದ್ದರಿಂದ ಸಾಂಕ್ರಾಮಿಕ ರೋಗದ ವಿರುದ್ಧ ದೇಶ ತೆಗೆದುಕೊಂಡ ತುರ್ತು ಅಗತ್ಯ ಕ್ರಮಗಳಿಗೆ, ಧರ್ಮದ ಬಣ್ಣ ಹಚ್ಚುವುದು ನಿಲ್ಲಿಸಬೇಕು ಮತ್ತು ಇಂತಹ ಪ್ರಯತ್ನಗಳಿಂದಲೂ ದೂರವಿರಬೇಕು ಎಂದು ಅನುರಾಗ್ ತಾಕೀತು ಮಾಡಿದ್ದಾರೆ.
ಇಂತಹ ತಲೆ ಬುಡವಿಲ್ಲದ ಆರೋಪಗಳಿಂದ ಮುಸ್ಲಿಂ ಸಮದಾಯದಲ್ಲಿ ಮತ್ತಷ್ಟು ಆತಂಕ ಸೃಷ್ಟಸುವ ಕೆಲಸ ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ. ಈ ಆಯೋಗ ಈ ಹಿಂದೆ ಭಾರತದ ಪೌರತ್ವ ಕಾಯ್ದೆ ತಿದ್ದುಪಡಿ ಯನ್ನು ಟೀಕಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.