ನಾಗ್ಪುರ: ಲಾಕ್ ಡೌನ್ ಮುಗಿದ ನಂತರ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಜೀವನೋಪಾಯವನ್ನು ಗಳಿಸುವುದನ್ನು ಖಚಿತಪಡಿಸಿಕೊಳ್ಳಲು, ನಾಗ್ಪುರ ಮಹಾನಗರ ಪಾಲಿಕೆ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಮೂಲಕ ಅದು ಭಿಕ್ಷುಕರು ಮತ್ತು ನಗರದಲ್ಲಿನ ವಸತಿಹೀನರಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ಪರಿಚಯಿಸುವ ಪ್ರಯತ್ನವನ್ನು ಪ್ರಾರಂಭಿಸಿದೆ.
ನಾಗ್ಪುರ ಪುರಸಭೆ ಸಹಕಾರ ಆಯುಕ್ತ ತುಕಾರಂ ಮುಂಡೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಲಾಕ್ ಡೌನ್ ಘೋಷಿಸಿದ ನಂತರ, ನಾವು ಮನೆಯಿಲ್ಲದವರನ್ನು ಮತ್ತು ಭಿಕ್ಷುಕರನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಿದ್ದೇವೆ ಮತ್ತು ಅವರಿಗೆ ಆಹಾರ, ವಸತಿ ಮತ್ತು ಇತರ ವಸ್ತುಗಳನ್ನು ಒದಗಿಸಿದ್ದೇವೆ” ಎಂದಿದ್ದಾರೆ.
ನಗರಗಳ ಸುತ್ತಮುತ್ತ ಸುಮಾರು 19 ಆಶ್ರಯ ಮನೆಗಳಿದ್ದು, ಅಲ್ಲಿ ಸುಮಾರು 1,500- 2,000 ಜನರು ವಾಸಿಸುತ್ತಿದ್ದಾರೆ. ಅಲ್ಲಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಮಾತ್ರವಲ್ಲದೆ ಕೆಲವು ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.
“ನಾವು ಅವರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ಪರಿಚಯಿಸಿದ್ದೇವೆ. ದೀರ್ಘಾವಧಿಯಲ್ಲಿ, ನಾಗ್ಪುರದಲ್ಲಿ ಭಿಕ್ಷಾಟನೆ ಕಾರ್ಯಕ್ರಮವನ್ನು ನಿರ್ಮೂಲನೆ ಮಾಡಲು ನಾವು ಅವರಿಗೆ ಕೌಶಲ್ಯಗಳನ್ನು ಒದಗಿಸುವ ಮೂಲಕ ಉದ್ಯೋಗವನ್ನು ದೊರಕಿಸಿಕೊಡುವ ಉದ್ದೇಶವನ್ನು ಹೊಂದಿದ್ದೇವೆ” ಎಂದು ಮುಂಡೆ ಹೇಳಿದರು.
“ನಾವು ಅವರಿಗೆ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡುವ ಮೂಲಕ ನಾವು ಅವರಿಗೆ ಮೇಕ್ ಓವರ್ ನೀಡುತ್ತಿದ್ದೇವೆ, ಇದರಿಂದಾಗಿ ಲಾಕ್ ಡೌನ್ ಮುಗಿದ ನಂತರ ಅವರು ತಮ್ಮ ಜೀವನೋಪಾಯವನ್ನು ಗಳಿಸಬಹುದು” ಎಂದು ಎನ್ಎಂಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೀಶ್ ಸೋನಿ ಹೇಳಿದರು.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರ ರಾಜ್ಯದಲ್ಲಿ 2,916 ಧನಾತ್ಮಕ COVID-19 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 295 ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು 187 ರೋಗಿಗಳು ವೈರಸ್ಗೆ ಬಲಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.