ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಅತ್ಯಂತ ನಾವೀನ್ಯ ವಿಧಾನದಲ್ಲಿ ಹಣ ಸಂಗ್ರಹ ಮಾಡಿದ ಚೆಸ್ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸೇರಿದಂತೆ ಭಾರತೀಯ ಚೆಸ್ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿಯವರು ಹಾಡಿಹೊಗಳಿದ್ದಾರೆ.
5 ದಿಗ್ಗಜ ಚೆಸ್ ಆಟಗಾರರಾದ ವಿದಿತ್ ಗುಜರಾತಿ, ಪಿ.ಹರಿಕೃಷ್ಣ, ಕೊನೇರು ಹಂಪಿ ಮತ್ತು ಧಾರಿಕ ಅವರು ವಿಶ್ವನಾಥನ್ ಆನಂದ್ ಜೊತೆ ಸೇರಿ ಆನ್ಲೈನ್ ಚೆಸ್ ಪ್ರದರ್ಶನದಲ್ಲಿ ಭಾಗವಹಿಸಿದರು, ಇದರಿಂದಾಗಿ 4.5 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದರು. ಈ ಮೊತ್ತವನ್ನು ಅವರು ಪಿಎಂ-ಕೇರ್ಸ್ ನಿಧಿಗೆ ಕೊಡುಗೆಯಾಗಿ ನೀಡಿದ್ದಾರೆ.
ಚೆಸ್ ಆಟಗಾರರ ಈ ನಾವೀನ್ಯ ವಿಧಾನ ಪ್ರಧಾನಿ ನರೇಂದ್ರ ಮೋದಿ ಅವರ ಮೆಚ್ಚುಗೆಯನ್ನು ಗಳಿಸಿದೆ. ಆಟಗಾರರನ್ನು ಟ್ವೀಟ್ ಮೂಲಕ ಪ್ರಧಾನಿ ಪ್ರಶಂಸಿಸಿದ್ದಾರೆ.
“ನಮ್ಮ ಚೆಸ್ ಆಟಗಾರರಿಂದ ನಾವೀನ್ಯ ಪ್ರಯತ್ನ ಮತ್ತು ಉಪಕಾರದ ನಡೆ” ಎಂದು ಐವರು ಆಟಗಾರರ ಹೆಸರನ್ನು ಉಲ್ಲೇಖಿಸಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, “ಇವರೊಂದಿಗೆ ಆನ್ಲೈನ್ ಚೆಸ್ ಕೂಟದಲ್ಲಿ ಭಾಗಿಯಾದವರು ಅತ್ಯಂತ ಅದ್ಭುತ ಅನುಭವವನ್ನು ಪಡೆದಿರುತ್ತಾರೆ ಎಂದು ನಾನು ಭಾವಿಸಿದ್ದೇನೆ” ಎಂದಿದ್ದಾರೆ.
Innovative effort and kind gesture by our chess players, including @vishy64theking, @viditchess, Pentala Harikrishna, B. Adhiban and @HarikaDronavali.
Am sure the participants would have had an enriching experience. https://t.co/g0fBnoFipK
— Narendra Modi (@narendramodi) April 15, 2020
ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 12 ಸಾವಿರದ ಗಡಿಯನ್ನು ತಲುಪಿದೆ. 350 ಮಂದಿ ಇದುವರೆಗೆ ಪ್ರಾಣ ತೆತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.