ನವದೆಹಲಿ: ಭಾರತ ಖಂಡಿತವಾಗಿಯೂ ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
ಅವೆನ್ಯೂ ಸುಪರ್ ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಾಮಿನಿ ಅವರು ಪಿಎಂ ಕೇರ್ಸ್ ನಿಧಿಗೆ 100 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ಮೋದಿ ಈ ಮಾತನ್ನು ಹೇಳಿದ್ದಾರೆ.
“ಒಟ್ಟಾಗಿ ಭಾರತವು ನಿಶ್ಚಿತವಾಗಿ ಕೊರೋನಾವೈರಸ್ ಸಮಸ್ಯೆಯನ್ನು ನಿರ್ಮೂಲನೆ ಮಾಡುತ್ತದೆ. ಎಲ್ಲಾ ವಲಯದ ಜನರು ಹೋರಾಟವನ್ನು ಬಲಿಷ್ಟಗೊಳಿಸುತ್ತಿದ್ದಾರೆ. ಬ್ರೈಟ್ ಸ್ಟಾರ್ ಇನ್ವೆಸ್ಟ್ಮೆಂಟ್ ಪಿಎಂ ಕೇರ್ಸ್ ನಿಧಿಗೆ ನೀಡಿದ ದೇಣಿಗೆ ಪ್ರಶಂಸಾರ್ಹ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ರಾಧಾಕಿಶನ್ ದಾಮನಿ ಅವರು ಕೇವಲ ಪಿಎಂ ಕೇರ್ಸ್ ನಿಧಿಗೆ ಮಾತ್ರವಲ್ಲ, ವಿವಿಧ ಪರಿಹಾರ ಕಾರ್ಯಗಳಿಗೆ 55 ಕೋಟಿ ರೂ.ಗಳನ್ನು ನೀಡಿದ್ದಾರೆ. ತಮ್ಮ ಗ್ರೂಪ್ ಕಂಪನಿ ಬ್ರೈಟ್ ಸ್ಟಾರ್ ಇನ್ವೆಸ್ಟ್ಮೆಂಟ್ ಮೂಲಕ ಅವರು ಈ ದೇಣಿಗೆಗಳನ್ನು ನೀಡಿದ್ದಾರೆ.
Together, India will certainly overcome the COVID-19 menace. The manner in which people from all walks of life are making the fight stronger is commendable.
The contribution to PM-CARES by Bright Star Investments is appreciable. https://t.co/BIfCCT9Zup
— Narendra Modi (@narendramodi) April 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.