ಶ್ರೀನಗರ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆ ಶುಕ್ರವಾರ ದಾಳಿಯನ್ನು ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕೆಲ್ ವಲಯದ ದುಡ್ನಿಯಾಲ್ ಪ್ರದೇಶದಲ್ಲಿ ಇದ್ದ ಉಗ್ರ ಶಿಬಿರಗಳನ್ನು ಭಾರತೀಯ ಸೇನೆಯು ಧ್ವಂಸಗೊಳಿಸಿದೆ. ಪಾಕಿಸ್ತಾನ ಸೇನೆಯ ಈ ಶಿಬಿರಗಳನ್ನು ಬಳಸಿ ಭಾರತದೊಳಗೆ ಉಗ್ರರನ್ನು ಸುಳಿಸುವ ಪ್ರಯತ್ನಗಳನ್ನು ನಡೆಸುತ್ತಿತ್ತು ಎಂದು ಹೇಳಲಾಗಿದೆ.
ಎಪ್ರಿಲ್ ಒಂದರಂದು ಈ ಶಿಬಿರಗಳ ಮೂಲಕವೇ ಕೆರನ್ ಸೆಕ್ಟರ್ ಸಮೀಪ ಭಾರತದೊಳಗೆ ಐವರು ಉಗ್ರರನ್ನು ನುಸುಳಿಸಲಾಗಿತ್ತು. ಈ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಭಾರತೀಯ ಯೋಧರು ಇವರನ್ನು ಹತ್ಯೆ ಮಾಡಿದ್ದರು.
ಭಾರತೀಯ ಯೋಧರು ಪಿಒಕೆಯಲ್ಲಿನ ಭಯೋತ್ಪಾದನಾ ಶಿಬಿರಗಳನ್ನು ನಾಶಪಡಿಸುತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.
ಶನಿವಾರ ಕೂಡ ಪಾಕಿಸ್ತಾನವು ಅಪ್ರಚೋದಿತ ಕದನ ವಿರಾಮವನ್ನು ಮಾಡಿದ್ದು, ಇದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಭಾರತೀಯ ಯೋಧರು ನೀಡಿದ್ದಾರೆ.
India carries out precision targeting of gun areas, terrorist launch pads and ammunition in response to unprovoked ceasefire violation by Pakistan in Keran Sector of Kupwara district. Reports of heavy damage on enemy side: Defence Spokesperson, Srinagar #JammuandKashmir pic.twitter.com/HXxVKPIuph
— ANI (@ANI) April 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.