ನವದೆಹಲಿ: ಕೋವಿಡ್-19 ಸೋಂಕಿನಿಂದಾಗಿ ದೇಶ ಲಾಕ್ಡೌನ್ ಆಗಿದ್ದು, ಜನ ಜೀವನದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಬಡವರು ಆಹಾರಕ್ಕಾಗಿ ಪರದಾಡುತ್ತಿದ್ದರೆ, ರೈತರು ತಮ್ಮ ಬೆಳೆಯನ್ನು ಖರೀದಿಸುವವರಿಲ್ಲದೆ ಕಂಗೆಟ್ಟು ಕೂತಿದ್ದಾರೆ. ಇಂತಹ ದುಃಸ್ಥಿತಿಯಲ್ಲಿ ಬಾಳೆ ಬೆಳೆಯುವ ರೈತರ ಕಷ್ಟ ಪರಿಹಾರಕ್ಕೆ ದೇಶದ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಮುಂದಾಗಿದ್ದಾರೆ.
ತಮ್ಮ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತದ್ದ ಕಾರ್ಮಿಕರಿಗೆ ಆಹಾರ ನೀಡಲು ತಟ್ಟೆಗೆ ಪರ್ಯಾಯವಾಗಿ ಬಾಳೆ ಎಲೆ ಬಳಕೆ ಮಾಡುತ್ತಿದ್ದಾರೆ. ಆ ಮೂಲಕ ಬಾಳೆ ಬೆಳೆದು ಕಂಗೆಟ್ಟು ಕೂತ ಬಡ ರೈತರಿಗೆ ಕೊಂಚ ಮಟ್ಟದ ರಿಲೀಫ್ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಹೀಂದ್ರಾ, ನಿವೃತ್ತ ಪತ್ರಕರ್ತರಾದ ಪದ್ಮಾ ರಾಮನಾಥ್ ಅವರ ಒಂದು ಇ-ಮೇಲ್ ಸಂದೇಶದಿಂದ ತಾನು ಈ ವ್ಯವಸ್ಥೆಯನ್ನು ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಪದ್ಮ ರಾಮನಾಥ್ ಅವರು ಮಹೀಂದ್ರಾ ಅವರಿಗೆ ಬ್ಲೂ ಟ್ಯಾಗ್ ಮಾಡಿ, ತಮ್ಮ ಕಾರ್ಖಾನೆಗಳಲ್ಲಿ ತಟ್ಟೆಗಳ ಬದಲು ಆಹಾರ ನೀಡಲು ಬಾಳೆ ಎಲೆಗಳನ್ನು ಏಕೆ ಬಳಸಬಾರದು? ಆ ಮೂಲಕ ಕಂಗೆಟ್ಟು ಕೂತಿರುವ ಬಡ ರೈತರಿಗೆ ಕೊಂಚ ಮಟ್ಟಿಗೆ ಸಹಾಯ ಮಾಡಬಹುದಲ್ಲ ಎಂಬ ಸಲಹೆಯ ಕಾರಣದಿಂದಲೇ ನಾವು ಕಾರ್ಮಿಕರಿಗೆ ಬಾಳೆ ಎಲೆಯಲ್ಲಿ ಆಹಾರ ನೀಡುವಂತೆ ಪ್ರೇರೇಪಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಪದ್ಮ ರಾಮನಾಥ್ ಅವರ ಸಲಹೆಯನ್ನು ಆ ಕೂಡಲೇ ನಮ್ಮ ತಂಡ ಸಮರ್ಥವಾಗಿ ಕಾರ್ಯ ರೂಪಕ್ಕೆ ತಂದಿದೆ ಎಂದಿರುವ ಮಹೀಂದ್ರಾ, ಕಾರ್ಮಿಕರು ಬಾಳೆ ಎಲೆಯನ್ನು ಬಳಸಿ ಆಹಾರ ಸೇವಿಸುತ್ತಿರುವ ಚಿತ್ರಗಳನ್ನು ತಮ್ಮ ಟ್ವಿಟ್ಟರ್ನಲ್ಲಿ ಹಾಕಿದ್ದಾರೆ. ಈ ಟ್ವೀಟ್ ಕೇವಲ ಒಂದು ಗಂಟೆಯಲ್ಲಿ 13000 ಕ್ಕೂ ಹೆಚ್ಚು ಬಾರಿ ರೀ-ಟ್ವೀಟ್ ಆಗಿದೆ. ಅಲ್ಲದೆ ರೈತರನ್ನು ಈ ರೀತಿಯಲ್ಲಿ ಬೆಂಬಲಿಸುತ್ತಿರುವುದಕ್ಕೆ ಹಲವಾರು ಮಂದಿ ಆನಂದ್ ಮಹೀಂದ್ರಾ ಅವರನ್ನು ಅಭಿನಂದಿಸಿದ್ದಾರೆ.
A retired journalist, Padma Ramnath mailed me out of the blue & suggested that if our canteens used banana leaves as plates, it would help struggling banana farmers who were having trouble selling their produce. Our proactive factory teams acted instantly on the idea…Thank you! pic.twitter.com/ouUx7xfMdK
— anand mahindra (@anandmahindra) April 9, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.