ನವದೆಹಲಿ: ಭಾರತೀಯ ರೈಲ್ವೆಯ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ ಐಆರ್ಸಿಟಿಸಿಯು ತನ್ನ ಅಡುಗೆ ಕೋಣೆಗಳ ಮೂಲಕ 50,000 ಹಸಿದ ಹೊಟ್ಟೆಗಳಿಗೆ ಆಹಾರವನ್ನು ನಿತ್ಯ ಸಿದ್ಧಪಡಿಸುತ್ತಿದೆ.
21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆಯಾದ ಬಳಿಕ ಐಆರ್ಸಿಟಿಸಿಯು 4,00,000 ಬಡವರಿಗೆ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡಿದೆ.
ಮೂಲಗಳ ಪ್ರಕಾರ, ಇದು ಐಆರ್ಸಿಟಿಸಿ ಬೇಸ್ ಕಿಚನ್ಗಳು ಸೇರಿದಂತೆ ದೇಶದ 28 ಸ್ಥಳಗಳಲ್ಲಿ ಆಹಾರವನ್ನು ಸಿದ್ಧಪಡಿಸುವ ಕಾರ್ಯವನ್ನು ನಡೆಸುತ್ತಿದೆ.
ವರದಿಗಳ ಪ್ರಕಾರ, ಏಪ್ರಿಲ್ 14ರಂದು ರೈಲ್ವೆ ಕಿಚನ್ 51000 ಸಿದ್ಧಪಡಿಸಿತ್ತು, ನವದೆಹಲಿ ರೈಲ್ವೆ ನಿಲ್ದಾಣದ ಐಆರ್ಸಿಟಿಸಿ ಬೇಸ್ ಕಿಚನ್ನಲ್ಲಿ ನಿತ್ಯ ಹೆಚ್ಚಿನ ಜನರಿಗೆ ಅಡುಗೆ ತಯಾರಿಸುವ ಕಾರ್ಯವನ್ನು ನಡೆಸಲಾಗಿದೆ ಎಂದು ಐಆರ್ಸಿಟಿಸಿ ವಕ್ತಾರ ಸಿದ್ದಾರ್ಥ್ ಸಿಂಗ್ ಹೇಳಿದ್ದಾರೆ. ಇಲ್ಲಿ ನಿತ್ಯ 8,000 ಜನರಿಗೆ ಅಡುಗೆ ತಯಾರಿಸಲಾಗುತ್ತಿದೆ, ಅದನ್ನು ರೈಲ್ವೆ ಪ್ರೊಟೆಕ್ಷನ್ ಪಡೆಗೆ ಮತ್ತು ಸರಕಾರದ ಆಡಳಿತಗಳಿಗೆ ನೀಡಿ ಬಡವರಿಗೆ ಹಂಚಲಾಗುತ್ತದೆ.
ವ್ಯರ್ಥವಾಗುವುದನ್ನು ತಪ್ಪಿಸುವ ಸಲುವಾಗಿ ಬೇಡಿಕೆಗೆ ಅನುಗುಣವಾಗಿ ಆಹಾರವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಿತ್ಯ ದಿನಕ್ಕೆ ಎರಡು ಬಾರಿ ಇಲ್ಲಿ ಆಹಾರವನ್ನು ಒದಗಿಸಲಾಗುತ್ತದೆ ಮತ್ತು ಬೆಳಗ್ಗೆ 6 ಗಂಟೆಯಿಂದಲೇ ಅಡುಗೆ ತಯಾರಿಸುವ ಕಾರ್ಯವನ್ನು ನಡೆಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.