ನವದೆಹಲಿ: ಕೊರೋನಾ ವೈರಸ್ ಭಾರತದೆಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಂದರ್ಭದಲ್ಲೇ ಇನ್ನೊಂದು ಆಘಾತಕಾರಿ ಸಂಗತಿ ಹೊರಬಿದ್ದಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಡೆಸಿದ ಅಧ್ಯಯನ ವರದಿಯ ಪ್ರಕಾರ ಭಾರತದಲ್ಲಿ ಕೊರೋನಾ ಒಟ್ಟಾರೆ ಸೋಂಕಿತರ ಮೂರನೇ ಒಂದು ಭಾಗದಷ್ಟು ಸೋಂಕಿತರು ಯಾವುದೇ ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿಲ್ಲ, ವಿದೇಶದಿಂದ ಆಗಮಿಸಿದ ಸೋಂಕಿತರ ಸಂಪರ್ಕವನ್ನು ನಡೆಸಿಲ್ಲ ಮತ್ತು ಸೋಂಕಿತರ ಜೊತೆಗೆ ಯಾವುದೇ ಸಂಪರ್ಕ ಇರದೇ ಹೋದರೂ ಕೆಲವು ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಹೀಗೆ ಸೋಂಕಿನ ಯಾವುದೇ ಹಿನ್ನೆಲೆಯನ್ನು ಹೊಂದಿರದ ಜನರಿಗೂ ಸೋಂಕು ಹರಡುತ್ತಿರುವುದು ಈಗ ದೇಶವನ್ನು, ಆರೋಗ್ಯ ರಕ್ಷಕರನ್ನು ಇನ್ನಷ್ಟು ಕಷ್ಟಕ್ಕೀಡು ಮಾಡಿದೆ. ರೋಗದ ಚಿಹ್ನೆಗಳು (ಸಿಂಟಮ್ಸ್) ಗಳು ಕಂಡು ಬಂದವರನ್ನು ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಸೋಂಕು ಇರುವುದು ಕಂಡು ಬಂದಿದೆ. ಇನ್ನು ಕೆಲವು ಸೋಂಕಿತರಿಗೆ ಸೋಂಕಿನ ಲಕ್ಷಣಗಳೇ ಕಂಡುಬಂದಿಲ್ಲವಾದರೂ, ತಪಾಸಣೆಯ ವೇಳೆ ಸೋಂಕು ದೃಢವಾಗಿದೆ.
ಈ ವರೆಗೆ ದೇಶದಲ್ಲಿ 5734 ಕೊರೋನಾ ಪ್ರಕರಣಗಳು ಕಂಡುಬಂದಿದ್ದು, 473.ಜನ ಚೇತರಿಸಿಕೊಂಡಿದ್ದರೆ, 166 ಮಂದಿ ಮೃತಪಟ್ಟಿದ್ದಾರೆ. ಐಸಿಎಂಆರ್ ಪ್ರಕಾರ ಈ ವರೆಗೆ ಸುಮಾರು 5000 ಕ್ಕೂ ಅಧಿಕ ಜನರಿಗೆ ತಪಾಸಣೆ ನಡೆಸಲಾಗಿದ್ದು, ಇವರಲ್ಲಿ 102 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇವರಲ್ಲಿ 40 ಜನರಿಗೆ ಯಾವುದೇ ಸೋಂಕಿತರನ್ನು ಸಂಪರ್ಕಿಸಿದ ಇತಿಹಾಸವಿಲ್ಲ ಎಂಬುದಾಗಿ ವರದಿ ಮಾಡಿದೆ. ಈ ವರದಿಯನ್ನು ದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಗದಿ ಮಾಡಿದ ಸೋಂಕು ತಪಾಸಣಾ ಕೇಂದ್ರಗಳ ಮೂಲಕವೇ ತಯಾರು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.