ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಹರಡಿಸುತ್ತಿರುವ ಮತ್ತು ನೆಲದ ಕಾನೂನನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ತಬ್ಲಿಘಿ ಜಮಾತ್ಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮುಸ್ಲಿಂ ರಾಷ್ಟ್ರೀಯ ಮಂಚ್ ಆಗ್ರಹಿಸಿದೆ.
ತಬ್ಲಿಘಿಗಳ ಅನುಚಿತ ವರ್ತನೆಯು ಭಾರತದ ಸಂವಿಧಾನವನ್ನು ಕೊಲೆ ಮಾಡುವಂತಿದೆ. ಅವರ ವರ್ತನೆ ಇಸ್ಲಾಂ ಮತ್ತು ಮಾನವೀಯತೆಗೆ ಅವಮಾನ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್ ಅಭಿಪ್ರಾಯಿಸಿದೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಅಧ್ಯಕ್ಷ ಮಹಮ್ಮದ್ ಅಫ್ಜಲ್ ಅವರು, ತಬ್ಲೀಘಿಗಳ ಮುಸ್ಲಿಂ ವಿರೋಧಿ ಮತ್ತು ಮಾನವೀಯತೆ ವಿರೋಧಿ ಕ್ರಮಗಳನ್ನು ಖಂಡಿಸಿದ್ದಾರೆ.
“ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಎಪ್ರಿಲ್ 5ರಂದು ರಾತ್ರಿ ದೀಪಗಳನ್ನು ಹಚ್ಚಿತ್ತು. ವೈರಸ್ ವಿರುದ್ಧದ ಹೋರಾಟದ ಸಂಕಲ್ಪವನ್ನು ಮಾಡಿತ್ತು. ಆದರೆ ಜಮಾತ್ ತಬ್ಲಿಘಿಗಳು ಸಾಂಕ್ರಾಮಿಕ ರೋಗವನ್ನು ಹೋರಾಡುವ ಮೂಲಕ ಸರ್ಕಾರದ ಎಲ್ಲಾ ನಿರ್ದೇಶನಗಳನ್ನು ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರವನ್ನು ಅವರು ಕಾಯ್ದುಕೊಳ್ಳುತ್ತಿಲ್ಲ. ಈ ಮೂಲಕ ಅವರು ಅಪಾರ ಜನರ ಜೀವವನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ” ಎಂದಿದ್ದಾರೆ.
“ಶಬೆ ಬರತ್” ಅಂಗವಾಗಿ ಭಾರತದ ಮುಸ್ಲಿಮರು ತಮ್ಮ ಮನೆಯಲ್ಲೇ ಇದ್ದು ಪ್ರಾರ್ಥನೆಯನ್ನು ನಡೆಸಬೇಕು. ಸಾಮಾಜಿಕ ಅಂತರದ ಸರ್ಕಾರದ ನಿರ್ದೇಶನವನ್ನು ತಪ್ಪದೇ ಪಾಲಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.