ನವದೆಹಲಿ: ಕೊರೋನಾ ಸೋಂಕಿನಿಂದ ದೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಿಂತ ಹೆಚ್ಚಾಗಿ ಆರೋಗ್ಯ ರಕ್ಷಕರು, ಪೊಲೀಸರು, ನೈರ್ಮಲ್ಯ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಒಂದೆಡೆ ಸೋಂಕು ತಮಗೆ ಹರಡದಂತೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು. ಸೋಂಕಿತರ ಶುಶ್ರೂಷೆ ಮಾಡಬೇಕು. ಇನ್ನು ಕೆಲವು ಸೋಂಕಿತರ ಉಪಟಳ ಸಹಿಸಿಕೊಂಡು, ತಮ್ಮ ಕುಟುಂಬದಿಂದ ದೂರವಿದ್ದು ಕಾರ್ಯ ನಿರ್ವಹಿಸಬೇಕು. ಇಂತಹ ಕಠಿಣ ಕೆಲಸ ಮಾಡುತ್ತಿರುವ ಆರೋಗ್ಯ ರಕ್ಷಕರು ಮಾತ್ರ ಸಮಸ್ಯೆಯ ಸುಳಿಯಲ್ಲಿದ್ದಾರೆ. ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಂಡಿಸಿದೆ.
ಅಲ್ಲದೆ ಜನಸೇವೆಗೆ ತಮ್ಮ ಜೀವನವನ್ನೇ ಪಣವಾಗಿಟ್ಟಿರುವ ಇಂತಹ ಯೋಧರ ಮೇಲೆ ಮಾತ್ರ ಯಾರಿಗೂ ಕರುಣೆ ಇಲ್ಲ. ಅವರನ್ನು ಹಿಂಸಿಸುವ, ಅವರ ಮೇಲೆ ಹಗೆ ಸಾಧಿಸುವ ಕೆಲಸವೂ ನಡೆಯುತ್ತಿದ್ದು ಇದು ಆಕ್ಷೇಪಣೀಯ. ಹಾಗಾಗಿ ಇಂತಹ ವಿದ್ವಂಸಕ ನೀತಿಗಳನ್ನು ತೊಡೆದುಹಾಕಲು ಕೇಂದ್ರ ಆರೋಗ್ಯ ಸಚಿವಾಲಯ “ಏನು ಮಾಡಬೇಕು ಮತ್ತು ಏನು ಮಾಡಬಾರದು” ಎಂಬ ಬಗ್ಗೆ ಸೂಚನೆಯನ್ನು ಹೊರಡಿಸಿದೆ.
ಮಾಡಬಹುದಾದದ್ದು
🔹 ಅಗತ್ಯ ಸೇವೆಗಳನ್ನು ನೀಡುತ್ತಿರುವವರಿಗೆ ಶ್ಲಾಘಿಸುವುದು ಮತ್ತು ಅವರ ಕುಟುಂಬದವರಿಗೆ ಬೆಂಬಲ ನೀಡುವುದು.
🔹 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್, ಭಾರತದ ಆರೋಗ್ಯ ಸಚಿವಾಲಯ ಅಥವಾ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿಗಳನ್ನಷ್ಟೇ ಹಂಚಿಕೊಳ್ಳುವುದು.
🔹 ಕೊರೋನಾ ಬಗ್ಗೆ ಹಂಚಿಕೊಳ್ಳುವ ಮಾಹಿತಿ ನಿಜವೋ, ಸುಳ್ಳೋ ಎಂಬುದನ್ನು ಕ್ರಾಸ್ ಚೆಕ್ ಮಾಡಿಕೊಂಡ ಮೇಲೆಯೇ ಹಂಚಿಕೊಳ್ಳುವುದು.
🔹 ಕೊರೋನಾದಿಂದ ಚೇತರಿಕೆ ಕಂಡವರ, ಗುಣಮುಖರಾದವರ ಮಾಹಿತಿ ಹಂಚಿಕೊಳ್ಳುವುದು.
ಮಾಡಬಾರದ್ದು
🔹 ಸೋಂಕಿತರ ಹೆಸರು ಅಥವಾ ಇನ್ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು.
🔹 ಭಯ, ಭೀತಿ ಹರಡುವುದನ್ನು ನಿಲ್ಲಿಸುವುದು.
🔹 ಆರೋಗ್ಯ ರಕ್ಷಕರು, ನೈರ್ಮಲ್ಯ ಕಾರ್ಮಿಕರು, ಪೊಲೀಸರಿಗೆ ಬೆಂಬಲ ನೀಡುವುದು.
🔹 ಯಾವುದೇ ಒಂದು ಪ್ರದೇಶ ಅಥವಾ ಸಮುದಾಯವನ್ನು ಕೊರೋನಾ ಕೇಂದ್ರ ಎಂದು ಗುರಿಯಾಗಿಸದಿರಿ
🔹 ಸೋಂಕಿತರನ್ನು ಬಲಿಪಶುಗಳಂತೆ ಬಿಂಬಿಸದಿರಿ. ಅವರು ಚೇತರಿಕೆ ಕಾಣುತ್ತಿರುವುದಾಗಿ ಹೇಳಿ. ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.