ಗ್ರೇಟರ್ ನೋಯ್ಡಾ: ಕೊರೋನಾ ವಿರುದ್ಧದ ಯುದ್ಧದಲ್ಲಿ ಸರ್ಕಾರಗಳ ಜೊತೆಗೆ ದೇಶದ ಪ್ರಸಿದ್ಧ ವ್ಯಕ್ತಿಗಳು, ಜನ ಸಾಮಾನ್ಯರು ಕೈ ಜೋಡಿಸಿದ್ದು, ಇದೀಗ ಭಾರತದ ಗ್ರೇಟರ್ ನೋಯ್ಡಾದ ಗಾಲ್ಫ್ ಆಟಗಾರ ಅರ್ಜುನ್ ಭಾಟಿ ಅವರು ದೇಣಿಗೆ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ತಾನು ಗಾಲ್ಫ್ ಆಟದಲ್ಲಿ ಈ ವರೆಗೆ ಗೆದ್ದುಕೊಂಡ ಟ್ರೋಫಿಗಳನ್ನು ತನ್ನ ಸಂಬಂಧಿಕರಿಗೆ ಹರಾಜು ಮಾಡಿ, ಅದರಿಂದ ದೊರೆತ 4 ಲಕ್ಷ 30 ಸಾವಿರ ರೂ. ಗಳನ್ನು ಪಿಎಂ ಕೇರ್ಸ್ಗೆ ನೀಡುವ ಮೂಲಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ.
ಕೊರೋನಾ ಸೋಂಕಿನಿಂದ ದೇಶ ಬಹಳ ಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದು, ದೇಶದಲ್ಲಿ ಆರ್ಥಿಕ ಸಮಸ್ಯೆ ಸೇರಿದಂತೆ ಇನ್ನಿತರ ಗಂಭೀರ ಸಮಸ್ಯೆಗಳು ಉದ್ಭವಿಸಿವೆ. ಬಡವರು ತುತ್ತು ಅನ್ನಕ್ಕೂ ಪರದಾಡುತ್ತಿದ್ದು ಈ ಸಂದರ್ಭದಲ್ಲಿ ದೇಶದ ರಕ್ಷಣೆಗೆ ಕೈ ಜೋಡಿಸುವುದು ಕರ್ತವ್ಯ. ಆದ್ದರಿಂದ ಟ್ರೋಫಿಗಳನ್ನು ಹರಾಜಿಗಿಟ್ಟು, ಮಾರಿ ಅದರಿಂದ ದೊರೆತ ಹಣವನ್ನು ದೇಣಿಗೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಸಂಬಂಧಿಕರು ಮತ್ತು ಸ್ನೇಹಿತರು ಈ ಟ್ರೋಫಿಗಳನ್ನು ಕೊಂಡುಕೊಂಡಿದ್ದು, ಲಾಕ್ಡೌನ್ ತೆರವಾದ ಬಳಿಕ ಅವುಗಳನ್ನು ಕೊಂಡುಕೊಂಡವರಿಗೆ ತಲುಪಿಸುವುದಾಗಿ ಭಾಟಿ ಹೇಳಿದ್ದಾರೆ. ಸ್ವಂತ ಸಂಪಾದನೆ ಇಲ್ಲದ ಕಾರಣ ಟ್ರೋಫಿ ಮಾರಿ ದೇಣಿಗೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
ಅರ್ಜುನ್ ಭಾಟಿ ಅವರ ಟ್ವೀಟ್ನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ʼದೇಶವಾಸಿಗಳ ಇಂತಹ ಭಾವನೆಗಳೇ, ಮಹಾಮಾರಿ ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿದೆʼ ಎಂದಿದ್ದಾರೆ.
देशवासियों की यही वो भावना है, जो कोरोना महामारी के समय सबसे बड़ा संबल है। #IndiaFightsCorona https://t.co/ija18XLrJ2
— Narendra Modi (@narendramodi) April 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.