ನವದೆಹಲಿ: ಕೊರೋನಾವೈರಸ್ ಎಂಬ ಮಹಾಮಾರಿಗೆ ಇಡೀ ದೇಶಕ್ಕೆ ದೇಶವೇ ಕಂಗಾಲಾಗಿದೆ. ಒಂದೆಡೆ ಸೋಂಕಿನಿಂದ ದೇಶವನ್ನು ಕಾಪಾಡಬೇಕಾದ ಸ್ಥಿತಿ ಇದ್ದರೆ, ಇನ್ನೊಂದೆಡೆಯಲ್ಲಿ ಈಗಾಗಲೇ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿಯೂ ಕಾರ್ಯ ಪ್ರವೃತ್ತರಾಗಬೇಕು. ಇನ್ನು ಆರೋಗ್ಯ ರಕ್ಷಕರಿಗಂತೂ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಬೇಕಾದ ಅಗತ್ಯ ಪಿಪಿಇ ಗಳ ಕೊರತೆಯೂ ಕಂಡುಬರುತ್ತದೆ. ಈ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಪ್ರತಿನಿತ್ಯ ಅಗತ್ಯ 1000 ಪಿಪಿಇ ಗಳನ್ನು ತಯಾರಿಸಿ ಕೊಡುವುದಾಗಿ ತಿಳಿಸಿದೆ. ಇದಕ್ಕೆ ಬೇಕಾದ ಕಚ್ಚಾ ವಸ್ತುಗಳನ್ನು ಯಮುನಾ ನಗರದಿಂದ ಖರೀದಿಸುತ್ತಿರುವುದಾಗಿಯೂ ಇಲಾಖೆ ಮಾಹಿತಿ ನೀಡಿದೆ.
ರೈಲ್ವೆ ಇಲಾಖೆ ತನ್ನ 17 ಕಾರ್ಯಾಗಾರಗಳಲ್ಲಿ ವೈದ್ಯರು, ದಾದಿಯರಿಗೆ ಬೇಕಾದ ಅಗತ್ಯ ಮೇಲುಡುಗೆಗಳು ಸೇರಿದಂತೆ ಪಿಪಿಇ ಸಾಧನಗಳ ತಯಾರಿಕೆಯಲ್ಲಿ ತೊಡಗಿದ್ದು ಕೊರೋನಾ ವಿರುದ್ದದ ಯುದ್ಧಕ್ಕೆ ಮತ್ತೆ ರಾಷ್ಟ್ರದ ಜೊತೆ ಕೈಜೋಡಿಸಿದೆ. ಈ ಹಿಂದೆ ಕೊರೋನಾ ಐಸೋಲೇಷನ್ಗಾಗಿ ಕೇವಲ 10 ದಿನಗಳಲ್ಲಿ 2500 ಬೋಗಿಗಳನ್ನು ಐಸೋಲೇಷನ್ ವಾರ್ಡ್ಗಳನ್ನಾಗಿ ಪರಿವರ್ತಿಸುವ ಮೂಲಕವೂ ರೈಲ್ವೇ ದೇಶದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿತ್ತು. ಅಲ್ಲದೆ ಅಗತ್ಯ ಸಂದರ್ಭದಲ್ಲಿ ಸುಮಾರು 3 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುವ ಭರವಸೆಯನ್ನೂ ಇಲಾಖೆ ನೀಡಿತ್ತು.
ಅಲ್ಲದೆ ನಿರ್ಗತಿಕರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿಯೂ ರೈಲ್ವೇ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಅದಕ್ಕಾಗಿ ಮೊಬೈಲ್ ಕಿಚನ್ಗಳನ್ನೂ ಆರಂಭಿಸಿತ್ತು. ಜೊತೆಗೆ ಹಣ್ಣು, ತರಕಾರಿ, ದಿನಸಿ ವಸ್ತುಗಳನ್ನು ಸಂಗ್ರಹಿಸಲು ದಿನದ 24 ಗಂಟೆಗಳೂ ಕಾರ್ಯ ನಿರ್ವಹಿಸುವ ಮೂಲಕ ದೇಶದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿತ್ತು. ಆ ಮೂಲಕ ಇತರ ಇಲಾಖೆಗಳಿಗೂ ರೈಲ್ವೇ ಇಲಾಖೆ ಮಾದರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.