ನವದೆಹಲಿ: ಕೊರೋನವೈರಸ್ ಹಿನ್ನೆಲೆಯಲ್ಲಿ ತನ್ನ ಮೂರು ಪ್ರೀಮಿಯಂ ರೈಲುಗಳ ಸೇವೆಗಳನ್ನು ಏಪ್ರಿಲ್ 15 ರಿಂದ 30 ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರೈಲು ಕ್ಯಾಟರಿಂಗ್ ಆಂಡ್ ಟೂರಿಸಂ ಲಿಮಿಟೆಡ್ (ಐಆರ್ಸಿಟಿಸಿ) ಮಂಗಳವಾರ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಆರ್ಸಿಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ ಪಿ ಮಾಲ್, “ನಮ್ಮ ಮೂರು ರೈಲುಗಳ ಸೇವೆಗಳನ್ನು ಏಪ್ರಿಲ್ 15 ರಿಂದ 30 ರವರೆಗೆ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ಯಾಕೆಂದರೆ ಅದನ್ನು ಚಲಾಯಿಸಲು ನಮಗೆ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.
ಲಖನೌ-ನವದೆಹಲಿ ಮತ್ತು ಮುಂಬೈ-ಅಹಮದಾಬಾದ್ ಮಾರ್ಗದ ನಡುವೆ ಎರಡು ತೇಜಸ್ ಎಕ್ಸ್ಪ್ರೆಸ್ ಮತ್ತು ವಾರಣಾಸಿ-ಇಂದೋರ್ ನಡುವಿನ ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ ಅನ್ನು ಓಡಿಸದಿರಲು ಕಾರಣವನ್ನು ಉಲ್ಲೇಖಿಸಿದ ಮಾಲ್, “ಈ ಎರಡೂ ರೈಲುಗಳ ಒಳಗೆ ಅಡುಗೆ, ಮನೆಗೆಲಸದಂತಹ ಎಲ್ಲಾ ಸೇವೆಗಳನ್ನು ಐಆರ್ಸಿಟಿಸಿ ಹೊರಗುತ್ತಿಗೆ ನೀಡಿದೆ. ಮತ್ತು ಅವರಲ್ಲಿ ಅನೇಕರು ತಮ್ಮ ಮನೆಗಳಿಗೆ ಹಿಂದಿರುಗಿದ್ದರಿಂದ ಆ ನೌಕರರು ಮತ್ತೆ ಸೇರುವಲ್ಲಿ ಸಮಸ್ಯೆ ಇದೆ” ಎಂದಿದ್ದಾರೆ.
“ಇದನ್ನು ಗಮನದಲ್ಲಿಟ್ಟುಕೊಂಡು ನಾವು ರೈಲು ಓಡಿಸದಂತೆ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಅವರು ಹೇಳಿದರು.
ಐಆರ್ಸಿಟಿಸಿ ತನ್ನ ಮೊದಲ ತೇಜಸ್ ಎಕ್ಸ್ಪ್ರೆಸ್ ರೈಲನ್ನು ಕಳೆದ ವರ್ಷ ಲಕ್ನೋ-ನವದೆಹಲಿ ನಡುವೆ ಕಾರ್ಯಾರಂಭ ಮಾಡಿದ್ದರೆ, ಈ ವರ್ಷದ ಆರಂಭದಲ್ಲಿ ಮುಂಬೈ-ಅಹಮದಾಬಾದ್ ನಡುವೆ ಎರಡನೇ ರೈಲು ಪ್ರಾರಂಭವಾಯಿತು.
ಐಆರ್ಸಿಟಿಸಿ ತನ್ನ ಕಾಶಿ ಮಹಾಕಾಲ್ ಎಕ್ಸ್ಪ್ರೆಸ್ ಅನ್ನು ವಾರಣಾಸಿ-ಇಂದೋರ್ ನಡುವೆ ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತು.
ಈ ರೈಲುಗಳ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮರುಪಾವತಿ ಮಾಡಲಾಗುವುದು ಎಂದು ಮಾಲ್ ಹೇಳಿದ್ದಾರೆ.
ಮಾರ್ಚ್ 24 ರಿಂದ ಏಪ್ರಿಲ್ 14 ರವರೆಗೆ ಪ್ರಯಾಣಿಕ, ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಸೇವೆಗಳನ್ನು ಭಾರತೀಯ ರೈಲ್ವೆ ಈಗಾಗಲೇ ಸ್ಥಗಿತಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.