ನವದೆಹಲಿ: ಕೊರೋನವೈರಸ್ ಜಾಗತಿಕ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಭಾರತವು ಎರಡು ಮತ್ತು ಮೂರನೇ ಹಂತದ ಮಧ್ಯದಲ್ಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಸಮುದಾಯ ಪ್ರಸರಣದ ಮೇಲೆ ದೇಶದ ಕೆಲವು ಭಾಗದಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಏಮ್ಸ್ ಆಸ್ಪತ್ರೆಯ ನಿರ್ದೇಶಕರು ಹೇಳಿಕೆ ನೀಡಿದ ತರುವಾಯ ಆರೋಗ್ಯ ಸಚಿವಾಲಯ ಈ ಮಾಹಿತಿಯನ್ನು ನೀಡಿದೆ.
ಸೋಮವಾರ ಮಾಹಿತಿಯನ್ನು ನೀಡಿದ ಗೇಮ್ಸ್ ನಿರ್ದೇಶಕ ಡಾ. ರಂದೀಪ್ ಗುಳೆರಿಯ ಅವರು, “ಕೆಲವೊಂದು ಕಡೆಗಳಲ್ಲಿ ಸ್ಥಳೀಯ ಸಮುದಾಯ ಪ್ರಸರಣವು ಕಂಡುಬಂದಿದೆ. ಭಾರತವು ಎರಡನೇ ಹಂತ (ಸ್ಥಳೀಯ ಪ್ರಸರಣ) ಮತ್ತು ಮೂರನೇ ಹಂತದ ನಡುವೆ ಇದೆ” ಎಂದು ಹೇಳಿದ್ದರು. ರಂದೀಪ್ ಅವರು ಕೊರೋನವೈರಸ್ ಟಾಸ್ಕ್ ಫೋರ್ಸ್ ಸದಸ್ಯರೂ ಆಗಿದ್ದಾರೆ.
ಅಲ್ಲದೆ, ಬಹುತೇಕ ಭಾರತದ ಪ್ರದೇಶ ಎರಡನೆಯ ಹಂತದಲ್ಲಿಯೇ ಇದೆ ಎಂಬ ಸಮಾಧಾನಕರ ಮಾಹಿತಿಯನ್ನು ಅವರು ನೀಡಿದ್ದಾರೆ.
ರಂದೀಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ” ನಾವು ಹೇಳಿರುವ ಮಾಹಿತಿಯನ್ನೇ ಏಮ್ಸ್ ನಿರ್ದೇಶಕರು ಹೇಳಿದ್ದಾರೆ” ಎಂದಿದ್ದಾರೆ.
“ಒಂದು ವೇಳೆ ದೇಶದಲ್ಲಿ ಸಮುದಾಯ ಪ್ರಸರಣ ಆರಂಭಗೊಂಡರೆ ನಾವೇ ಮೊದಲಿಗರಾಗಿ ದೇಶದ ಜನರಿಗೆ ಮಾಹಿತಿಯನ್ನು ನೀಡುತ್ತೇವೆ. ಏಮ್ಸ್ ನಿರ್ದೇಶಕರು ಸ್ಥಳೀಯ ಪ್ರಸರಣದ ಬಗ್ಗೆ ಹೇಳಿದ್ದಾರೆ. ಅಂದರೆ ಕೆಲವೊಂದು ಭಾಗಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರಸರಣ ನಡೆದಿದೆ ಎಂಬುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.