ನವದೆಹಲಿ: ಕೊರೋನಾ ಕಾಟಕ್ಕೆ ವಿಶ್ವವೇ ಅಲ್ಲೋಲ ಕಲ್ಲೋಲವಾಗಿದೆ. ಈ ಸೋಂಕಿಗೆ ಈ ವರೆಗೂ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸವಾಗುತ್ತಿದ್ದರೂ, ಯಾವ ದೇಶವೂ ಇದರಲ್ಲಿ ಯಶಸ್ಸು ಮಾತ್ರ ಕಂಡಿಲ್ಲ.
ಈ ಸಂದರ್ಭ ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಮಾಡುವ ಮೂಲಕ ಕೊಂಚ ಮಟ್ಟಿಗೆ ಈ ರೋಗದಿಂದ ನಿರಾಳರಾಗುವುದು ಸಾಧ್ಯ ಎಂಬುದನ್ನೂ ವೈದ್ಯಕೀಯ ಲೋಕ ಕಂಡುಕೊಂಡಿದ್ದು, ಭಾರತದಲ್ಲಿಯೂ ಇದನ್ನು ಬಳಕೆ ಮಾಡಲಾಗಿತ್ತು. ಆದರೆ ಕಡಿಮೆ ಲಭ್ಯತೆಯ ಕಾರಣ ಇದರ ರಪ್ತಿನ ಮೇಲೆ ಕೇಂದ್ರ ನಿರ್ಬಂಧ ಹೇರಿತ್ತು. ಆದರೆ ಅಮೆರಿಕವೂ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳು ಈ ಔಷಧವನ್ನು ಕೋರಿ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದ್ದು, ಮಾನವೀಯತೆಯ ನೆಲೆಯಲ್ಲಿ ಇದೀಗ ಈ ಔಷಧ ರಪ್ತಿನ ಮೇಲೆ ಹೇರಿದ್ದ ನಿಯಂತ್ರಣವನ್ನು ಕೇಂದ್ರ ಸಡಿಲಗೊಳಿಸಿದೆ. ಆ ಮೂಲಕ ವಿದೇಶಗಳಿಗೂ ಕೊರೋನಾ ವಿರುದ್ದ ಹೋರಾಟದಲ್ಲಿ ಸಹಕರಿಸಲು ಭಾರತ ಮುಂದಾಗಿದೆ.
ಇದರ ಅಗತ್ಯತೆಗಳಿಗನುಗುಣವಾಗಿ ಮತ್ತು ಲಭ್ಯತೆಯ ಆಧಾರದಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದರ ರಪ್ತಿನ ಪ್ರಮಾಣವನ್ನು ನಿರ್ಧರಿಸಲಿರುವುದಾಗಿಯೂ ಕೇಂದ್ರ ತಿಳಿಸಿದೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರಾಸಿಟಮೋಲ್ ಮಾತ್ರೆಗಳ ರಪ್ತಿಗೆ ಹೇರಿದ್ದ ನಿರ್ಬಂಧವನ್ನು ತೆಗೆದು ಹಾಕಿರುವುದಾಗಿಯೂ ಕೇಂದ್ರ ಸರ್ಕಾರ ತಿಳಿಸಿದ್ದು, ಆ ಮೂಲಕ ಇತರ ದೇಶಗಳಿಗೂ ನೆರವು ನೀಡುವ ಮಾದರಿ ಕಾರ್ಯಕ್ಕೆ ಮೋದಿ ನೇತೃತ್ವದ ಕೇಂದ್ರ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.