ನವದೆಹಲಿ: ಬಿಜೆಪಿ ಪಕ್ಷದ 40ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ಕಾರ್ಯಕರ್ತರಿಗೆ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಐದು ಮನವಿಗಳನ್ನು ಮಾಡಿದ್ದಾರೆ.
ದೇಶಕ್ಕೆ ದೇಶವೇ ಕೊರೋನಾ ಮಹಾಮಾರಿಯ ಹಿಡಿತಕ್ಕೆ ನಲುಗಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ವಿಶ್ವವೇ ಹೋರಾಟಕ್ಕೆ ಸಜ್ಜಾಗಿದೆ. ಭಾರತದಲ್ಲಿಯೂ ಮೋದಿ ಜೊತೆ ನಾವಿದ್ದೇವೆ ಎಂಬಂತೆ ದೀಪಗಳನ್ನು ಉರಿಸುವ ಮೂಲಕ ಅಭೂತಪೂರ್ವ ಬೆಂಬಲವನ್ನೂ ಭಾರತೀಯರು ಘೋಷಿಸಿದ್ದಾರೆ. ಈ ಸೋಂಕನ್ನು ಬೇರು ಸಹಿತ ಕಿತ್ತು ಹಾಕುವಲ್ಲಿ ಜನರ ಸಹಕಾರ ಬೇಕಿದ್ದು, ಆ ಸಲುವಾಗಿ ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಗೂ ಸೂಚನೆಗಳನ್ನು ನೀಡಿದ್ದಾರೆ. ಇಂತಹ ಕಠಿಣ ಸ್ಥಿತಿಯಲ್ಲಿ ಬಡವರು ಹಸಿವಿನಲ್ಲಿ ಒದ್ದಾಡುತ್ತಿದ್ದರೆ ಅವರಿಗೆ ಆಹಾರ ಒದಗಿಸುವಂತೆಯೂ ಮನವಿ ಮಾಡಿದ್ದಾರೆ.
🔹 ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬಡವರ್ಗದ ಜನರಿಗೆ ಆಹಾರ, ಪಡಿತರವನ್ನು ವಿತರಿಸುವಂತೆ ಮೋದಿ ವಿನಂತಿಸಿದ್ದಾರೆ.
🔹 ಮಾಸ್ಕ್, ಬಟ್ಟೆ ಇತ್ಯಾದಿಗಳನ್ನು ಬಡವರಿಗೆ ವಿತರಿಸಲು ಮತ್ತು ಕಾರ್ಯಕರ್ತರೂ ಮಖ, ಕೈಗಳನ್ನು ಮುಚ್ಚಿಕೊಂಡು ಇತರರಿಗೆ ಸಹಾಯ ಮಾಡುವ ಮೂಲಕ ದೇಶವನ್ನು ಸೋಂಕು ಹರಡದಂತೆ ಕಾಪಾಡಿಕೊಳ್ಳಲು ಮೋದಿ ಮನವಿ ಮಾಡಿದ್ದಾರೆ.
🔹 ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರು, ಪೊಲೀಸರು, ಪೌರ ಕಾರ್ಮಿಕರು, ಬ್ಯಾಂಕ್, ಪೋಸ್ಟ್ ಆಫೀಸ್ ನೌಕರರು ಸೇರಿದಂತೆ ಲಾಕ್ಡೌನ್ ಸಂದರ್ಭದಲ್ಲಿಯೂ ಸೇವೆ ಒದಗಿಸುತ್ತಿರುವವರಿಗೆ ಧನ್ಯವಾದ ಸಮರ್ಪಿಸುವುದು.
🔹ಕೊರೋನಾ ವಿರುದ್ಧ ಹೋರಾಟಕ್ಕಾಗಿ ಸಿದ್ಧ ಪಡಿಸಿರುವ ಆರೋಗ್ಯ ಸೇತು ಅಪ್ಲಿಕೇಶನ್ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವುದು. ಈ ಅಪ್ಲಿಕೇಶನ್ ಅನ್ನು ಕಾರ್ಯಕರ್ತರೂ ಉಪಯೋಗಿಸುವುದು ಮತ್ತು ಇತರರಿಗೂ ಇದನ್ನು ಉಪಯೋಗಿಸುವಂತೆ ತಿಳುವಳಿಕೆ ನೀಡುವುದು.
🔹ಪಿಎಂ ಕೇರ್ಸ್ ಸಹಾಯನಿಧಿಗೆ ಧನ ಸಹಾಯ ನೀಡುವುದು ಜೊತೆಗೆ ಕನಿಷ್ಟ 40 ಮಂದಿಯಾದರೂ ದೇಣಿಗೆ ನೀಡುವಂತೆ ಪ್ರೇರೇಪಿಸುವುದು. ಆ ಮೂಲಕ ಕೊರೋನಾ ಹೋರಾಟಕ್ಕೆ ಸರ್ಕಾರಕ್ಕೆ ಆರ್ಥಿಕ ಬೆಂಬಲ ನೀಡುವುದು.
ಈ ಮೇಲೆ ತಿಳಿಸಿದ ಮನವಿಯನ್ನು ಬಿಜೆಪಿ ಕಾರ್ಯಕರ್ತರಲ್ಲಿ ಮೋದಿ ಮಾಡಿಕೊಂಡಿದ್ದು ಆ ಮೂಲಕ ಆರೋಗ್ಯಪೂರ್ಣ ದೇಶ ನಿರ್ಮಾಣದಲ್ಲಿ ತೊಡಗಿಕೊಳ್ಳುವಂತೆ ತಮ್ಮ ಪಕ್ಷದ ಬೆಂಬಲಿಗರಿಗೆ ತಿಳಿಸಿದ್ದಾರೆ. ಜೊತೆಗೆ ಇಂತಹ ಕಠಿಣ ಪರಿಸ್ಥಿತಿ ಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದೇ ಮೂಲಮಂತ್ರವಾಗಿದ್ದು, ಅದನ್ನು ಕಾಯ್ದುಕೊಂಡು ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಮೋದಿ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.