ನವದೆಹಲಿ: ಕೊರೋನಾದಿಂದ ಸ್ತಬ್ಧವಾಗಿರುವ ದೇಶದ ಮೂಲೆ ಮೂಲೆಗೆ, ಜನಸಾಮಾನ್ಯರಿಗೆ ಬೇಕಾದ ಅಗತ್ಯ ವಸ್ತುಗಳನ್ನು ತಲುಪಿಸಲು ಲಾರಿ, ಟ್ರಕ್ ಚಾಲಕರಿಗೆ ಅನುಕೂಲ ಕಲ್ಪಿಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದೆ.
ದಿನಸಿ, ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ಮತ್ತು ಅಂತರ್ ರಾಜ್ಯಕ್ಕೆ ಸಾಗಾಟ ಮಾಡುವುದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಸರಕು ಸಾಗಾಟ ವಾಹನಗಳಿಗೆ ಮಾಡಿಕೊಡುವಂತೆ ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಈ ಕುರಿತು ಸಮನ್ವಯ ಸಾಧಿಸುವಂತೆಯೂ ರಾಜ್ಯ ಸರ್ಕಾರಗಳಿಗೆ ಕೇಂದ್ರ ತಿಳಿಸಿದೆ. ಇದಕ್ಕಾಗಿ ಸಂಸ್ಥೆಗಳು ಮತ್ತು ಸರಬರಾಜು ಮಾಡುವ ಕಂಪನಿ, ವಾಹನಗಳಿಗೆ ಅಗತ್ಯ ಕಾಗದ ಪತ್ರಗಳನ್ನು ನೀಡಲಾಗುವುದಾಗಿಯೂ ಕೇಂದ್ರ ತಿಳಿಸಿದೆ.
ಸರಕು ಸಾಗಾಟಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳು ಕಾರ್ಮಿಕರನ್ನು ಒಟ್ಟುಗೂಡಿಸುವಲ್ಲಿಯೂ ತೊಂದರೆಗಳನ್ನು ಅನುಭವಿಸುತ್ತಿದೆ. ಈ ಸಮಸ್ಯೆ ನಿವಾರಿಸಲು ಸ್ಥಳೀಯ ಆಡಳಿತಗಳನ್ನು ಸಂಪರ್ಕಿಸುವಂತೆಯೂ ಸೂಚಿಸಲಾಗಿದೆ. ಅಲ್ಲದೆ ಕಾರ್ಮಿಕರಿಗೆ ಸಹಾಯಕವಾಗುವಂತೆ ಇ-ಪಾಸ್ ಸಿಸ್ಟಂ ಅನ್ನು ಜಾರಿಗೊಳಿಸಿರುವುದಾಗಿಯೂ ಕೇಂದ್ರ ಸರಕಾರ ತಿಳಿಸಿದ್ದು, ಆ ಮೂಲಕ ದೇಶದ ಜನರ ಆಹಾರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.