ನವದೆಹಲಿ: 24ನೇ ಮತ್ತು ಕೊನೆಯ ಜೈನ ತೀರ್ಥಂಕರ ಭಗವಾನ್ ಮಹಾವೀರ ಅವರ ಜನ್ಮದಿನವನ್ನು ಇಂದು ದೇಶವ್ಯಾಪಿಯಾಗಿ ಆಚರಿಸಲಾಗುತ್ತಿದೆ. ಈ ದಿನ ಜೈನ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ದಿನವಾಗಿದೆ. ಅವರ ಧಾರ್ಮಿಕ ಬದುಕಿನಲ್ಲಿ ಈ ದಿನ ಅತ್ಯಂತ ಮಹತ್ವವನ್ನು ಹೊಂದಿದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೇರಿದಂತೆ ಅನೇಕ ಗಣ್ಯರು ಟ್ವೀಟ್ ಮಾಡುವ ಮೂಲಕ ಭಗವಾನ್ ಮಹಾವೀರ ಜಯಂತಿಯನ್ನು ಸ್ಮರಿಸಿದ್ದಾರೆ.
ರಾಷ್ಟ್ರಪತಿಗಳು ಟ್ವೀಟ್ ಮಾಡಿ, “ದೇಶದ ನಾಗರಿಕರಿಗೆ ಹೃದಯಪೂರ್ವಕ ಅಭಿನಂದನೆಗಳು ಮಹಾವೀರನ ಬೋಧನೆಗಳು ಇಂದಿಗೂ ಪ್ರಸ್ತುತ” ಎಂದಿದ್ದಾರೆ.
महावीर जयंती के शुभ अवसर पर, सभी देशवासियों, विशेषकर जैन समुदाय को, मेरी हार्दिक शुभकामनाएँ।
सत्य, अहिंसा, अस्तेय और अपरिग्रह की भगवान महावीर की शिक्षाएं आज भी प्रासंगिक हैं।
मेरी कामना है कि यह पर्व सभी के जीवन में स्वास्थ्य, शांति और समृद्धि का संचार करे।
— President of India (@rashtrapatibhvn) April 6, 2020
ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, “ದೇಶವಾಸಿಗಳಿಗೆ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಕಾಮನೆಗಳು. ಸತ್ಯ, ಅಹಿಂಸೆ, ತ್ಯಾಗ ಮತ್ತು ತಪಸ್ಸಿನಿಂದ ಆಧಾರಿತವಾದ ಆತನ ಜೀವನ ಪ್ರತಿಯೊಬ್ಬರಿಗೂ ನಿತ್ಯ ಪ್ರೇರಣಾದಾಯಕ ಉಳಿಯಲಿದೆ” ಎಂದಿದ್ದಾರೆ.
सभी देशवासियों को महावीर जयंती की हार्दिक शुभकामनाएं। सत्य, अहिंसा, त्याग और तपस्या पर आधारित उनका जीवन हर किसी के लिए सदैव प्रेरणास्रोत बना रहेगा।
— Narendra Modi (@narendramodi) April 6, 2020
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿ, “ಭಗವಾನ್ ಮಹಾವೀರ ಅತ್ಯಂತ ಸ್ಪೂರ್ತಿದಾಯಕ ಮತ್ತು ಪ್ರಭಾವಿ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬ. ನಾವೆಲ್ಲರೂ ಸಹಾನುಭೂತಿ ಮತ್ತು ಕರುಣೆಯ ಮೂಲಕ ಭಾತೃತ್ವ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವ ಮತ್ತು ಮಹಾವೀರನಿಗೆ ಗೌರವಗಳನ್ನು ಸಲ್ಲಿಸೋಣ” ಎಂದಿದ್ದಾರೆ.
महावीर जयंती के पावन अवसर पर देशवासियों को हार्दिक बधाई और शुभकामनाएं देता हूं।
भगवान महावीर, इस संसार में जन्म लेने वाले सबसे तेजस्वी और मूर्धन्य अध्यात्मिक गुरुओं में से थे। #MahavirJayanti pic.twitter.com/7fadNmqrbk
— Vice President of India (@VPSecretariat) April 6, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.