ಶ್ರೀನಗರ: ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸಹಾಯವನ್ನು ಮಾಡುವ ಸಲುವಾಗಿ, ಭಾರತೀಯ ಸೇನೆಯು ಉಧಂಪುರದಲ್ಲಿ ಕಮಾಂಡ್ ಆಸ್ಪತ್ರೆಯನ್ನು ತೆರೆದಿದೆ.
ಶಂಕಿತರ ಸ್ಯಾಂಪಲ್ ಟೆಸ್ಟ್ ಅನ್ನು ಈ ಆಸ್ಪತ್ರೆಯಲ್ಲಿ ನಡೆಸಲಾಗುತ್ತದೆ. ಸೋಂಕಿತ ರೋಗಿಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ ಪರಿಕರಗಳು ಕೂಡ ಆಸ್ಪತ್ರೆಯಲ್ಲಿ ಇದೆ. ಹೆಚ್ಚಿನ ವಾರ್ಡುಗಳನ್ನು ಕೊರೋನ ಸ್ಪೆಸಿಫಿಕ್ ಇಂಟೆನ್ಸಿವ್ ಕೇರ್ ಯುನಿಟ್ ಆಗಿ ಪರಿವರ್ತಿಸಲಾಗಿದೆ ಎಂದು ಆಸ್ಪತ್ರೆಯ ಕಮಾಂಡೆಂಟ್ ಮೇಜರ್ ಜನರಲ್ ಎಸ್. ಸಿ. ಗುಪ್ತ ವರದಿಗಾರರಿಗೆ ತಿಳಿಸಿದ್ದಾರೆ.
“ನಾವು ಪ್ರತಿಬಾರಿಯೂ ನಮ್ಮ ಶತ್ರುಗಳ ವಿರುದ್ಧ ಜಯ ಗಳಿಸುತ್ತೇವೆ. ಈ ಬಾರಿ ನಮ್ಮ ಶತ್ರು ಕೋವಿಡ್-19. ಈ ಸಾಂಕ್ರಾಮಿಕ ರೋಗದ ವಿರುದ್ಧವೂ ಜಯಗಳಿಸಲು ನಮ್ಮ ಕಮಾಂಡ್ ಆಸ್ಪತ್ರೆ ಸಂಪೂರ್ಣ ಸಜ್ಜಾಗಿದೆ” ಇಂದು ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸದಾ ಸಿದ್ಧವಾಗಿರುವ ಸೇನೆಯು, ಈ ಬಾರಿಯೂ ತನ್ನ ಸಂಪ್ರದಾಯದಂತೆ ಸರಕಾರ ಮತ್ತು ಆಡಳಿತಕ್ಕೆ ಸಂಪೂರ್ಣವಾದ ಬೆಂಬಲವನ್ನು ನೀಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಜಿಲ್ಲಾಡಳಿತವು ಏಪ್ರಿಲ್ ಒಂದರಂದು ನಮ್ಮನ್ನು ಸಂಪರ್ಕಿಸಿ ನೆರವನ್ನು ಕೇಳಿತ್ತು. ಸಮಯವನ್ನು ವ್ಯರ್ಥ ಮಾಡದೆ ನಾವು ಮರುದಿನವೇ ಪರೀಕ್ಷೆಯನ್ನು ಆರಂಭಿಸಿದೆವು, ಕಮಾಂಡೋ ಆಸ್ಪತ್ರೆಯಲ್ಲಿ ಇದುವರೆಗೆ 68 ಸ್ಯಾಂಪಲ್ಗಳನ್ನು ಪರೀಕ್ಷಿಸಲಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.