ನವದೆಹಲಿ: ಪ್ರಧಾನಮಂತ್ರಿ ಜನಧನ್ ಯೋಜನೆಯಡಿ ಇಂದಿನಿಂದ ಮಹಿಳೆಯರು 500 ರೂಪಾಯಿಗಳನ್ನು ಪಡೆಯಲಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವ ಜನರಿಗಾಗಿ ಮೋದಿ ಸರ್ಕಾರ ಈ ಯೋಜನೆಯನ್ನು ತಂದಿದೆ.
ಮುಂದಿನ ಮೂರು ತಿಂಗಳು ಜನಧನ್ ಫಲಾನುಭವಿಗಳು ರೂ.500 ಪಡೆಯಲಿದ್ದಾರೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಘೋಷಣೆ ಮಾಡಿದಂತೆ ಬುಧವಾರ ಮೊದಲ ಕಂತಿನ ರೂ.500 ಅನ್ನು ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ.
ಬ್ಯಾಂಕ್ ಅಕೌಂಟ್ ನಂಬರ್ 0 ಮತ್ತು 1 ರಿಂದ ಕೊನೆಗೊಳ್ಳುವ ಫಲಾನುಭವಿಗಳ ಅಕೌಂಟ್ ಅವರಿಗೆ ಏಪ್ರಿಲ್ 3 ರಂದು, 2 ಮತ್ತು 3 ರಿಂದ ಕೊನೆಗೊಳ್ಳುವ ಅಕೌಂಟ್ ಅವರಿಗೆ ಏಪ್ರಿಲ್ 4 ರಂದು, 4 ಮತ್ತು 5 ರಿಂದ ಕೊನೆಗೊಳ್ಳುವ ಅಕೌಂಟ್ ಅವರಿಗೆ ಏಪ್ರಿಲ್ 7 ರಂದು, 6 ಮತ್ತು 7 ರಂದು ಕೊನೆಗೊಳ್ಳುವ ಅಕೌಂಟ್ ಅವರಿಗೆ ಏಪ್ರಿಲ್ 8 ರಂದು ಹಾಗೂ 8 ಮತ್ತು 9 ರಿಂದ ಕೊನೆಗೊಳ್ಳುವ ಅಕೌಂಟ್ ಅವರಿಗೆ ಏಪ್ರಿಲ್ 9 ರಂದು 500 ರೂ.ಗಳನ್ನು ವರ್ಗಾವಣೆ ಮಾಡಲಾಗುವುದು.
ಎಪ್ರಿಲ್ 9 ರಿಂದ ಫಲಾನುಭವಿಗಳು ಸ್ಥಳೀಯ ಬ್ಯಾಂಕಿಗೆ ತೆರಳಿ ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಯಾವುದೇ ರೀತಿಯ ಸಂಕಷ್ಟಗಳು ಎದುರಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಣೆ ಮಾಡಿದ್ದಾರೆ. ಗರಿಬ್ ಕಲ್ಯಾಣ ಯೋಜನೆಯಡಿ ಕಾರ್ಮಿಕರಿಗೆ, ಬಡವರಿಗೆ ಮತ್ತು ಸಮಾಜದ ಇತರ ದುರ್ಬಲ ವರ್ಗದವರಿಗೆ ಹಲವಾರು ಪ್ರಯೋಜನಗಳು ಸಿಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.