ನವದೆಹಲಿ: ಎಲ್ಲೆಡೆ ಕೊರೋನಾದ ರುದ್ರ ನರ್ತನ ನಡೆಯುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹತೋಟಿಯಲ್ಲಿಡಲು ಕೇಂದ್ರ ಸರ್ಕಾರ ಲಾಕ್ಡೌನ್ನಂತಹ ಕ್ರಮಗಳನ್ನು ಅನುಸರಿಸಲು ಆದೇಶಿಸಿದರೂ, ಕೆಲವರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ. ಹಾಗಾಗಿ ಸೋಂಕು ಅವ್ಯಾಹತವಾಗಿ ಹರಡುತ್ತಿದೆ.
ಸೋಂಕು ಹರಡವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಅವರು ಎಲ್ಲರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ನಿನ್ನೆ ಪ್ರಧಾನಿ ಮೋದಿ ಅವರು ಎಲ್ಲಾ ಕ್ಷೇತ್ರದ ಕ್ರೀಡಾಪಟುಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದ್ದಾರೆ.
Prime Minister Narendra Modi held meeting with 40 top sportspersons from various sports via video conferencing today, on #COVID19 situation in the country. pic.twitter.com/NGzl4mL45x
— ANI (@ANI) April 3, 2020
ವಿರಾಟ್ ಕೊಹ್ಲಿ, ಪಿ. ವಿ. ಸಿಂಧು, ಧೋನಿ ಸೇರಿದಂತೆ ಇನ್ನೂ ಅನೇಕರು ಈ ಸಭೆಯಲ್ಲಿ ಭಾಗವಹಿಸಿದ್ದು, ತಮ್ಮ ಅಭಿಮಾನಿಗಳಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಿದ್ದಾರೆ. ಇದು ದೇಶದ ಜನರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಯುದ್ಧ. ಈ ಯುದ್ಧವನ್ನು ಗೆಲ್ಲಬೇಕಾದರೆ ಸರ್ಕಾರ, ಅಧಿಕಾರಿಗಳು ನೀಡುವ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಬೇಕು. ಆ ಮೂಲಕ ಮಾತ್ರವೇ ಈ ಮಹಾಮಾರಿಯಿಂದ ರಕ್ಷಿಸಿಕೊಳ್ಳಬಹುದು ಎನ್ನುವ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ಮನವರಿಕೆ ಮಾಡಿಕೊಡುವಂತೆ ಮೋದಿ ಮನವಿ ಮಾಡಿದ್ದಾರೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಈಗಾಗಲೇ ಅನೇಕ ಮಂದಿ ಭಾರತೀಯ ಕ್ರೀಡಾಪಟುಗಳು ದೇಣಿಗೆಯನ್ನು ನೀಡಿದ್ದು, ಆ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣ, ಜಾಹೀರಾತುಗಳ ಮೂಲಕವೂ ಜನರಲ್ಲಿ ಎಚ್ಚರ ಮೂಡಿಸುವಂತೆ ಮೋದಿ ಕ್ರೀಡಾಪಟುಗಳಿಗೆ ತಿಳಿಸಿದ್ದಾರೆ.
ಈ ಸಭೆಯಲ್ಲಿ ಸಚಿನ್ ತೆಂಡೂಲ್ಕರ್, ಕೊಹ್ಲಿ, ಪಿ.ವಿ. ಸಿಂಧು, ಗಂಗೂಲಿ, ಧೋನಿ, ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಶಮಿ, ಕೆ. ಎಲ್. ರಾಹುಲ್, ಚಟೇಶ್ವರ್ ಪೂಜಾರಿ, ಯುವರಾಜ್ ಸಿಂಗ್, ಜಹೀರ್ ಖಾನ್, ಪಿ. ಟಿ. ಉಷಾ, ಯೋಗೇಶ್ವರ್ ದತ್ತ್, ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಮೇರಿ ಕೋಮ್, ಹಿಮಾ ದಾಸ್, ವಿಶ್ವನಾಥ್ ಆನಂದ್, ರಾಣಿ ರಾಂಪಾಲ್, ದೀಪಿಕಾ ಕುಮಾರಿ, ಮೀರಾಬಾಯಿ ಚಾನು, ನಿರಜ್ ಛೋಪ್ರಾ, ಶರದ್ ಕುಮಾರ್, ಅಪೂರ್ವಿ ಚಂಡೇಲಾ, ಮನು ಭಾಕೇರ್, ತರುಣದೀಪ್ ರೈ, ಭಾಯಿಚುಂಗ್ ಭುಟಿಯಾ, ಸರ್ದಾರ್ ಸಿಂಗ್, ಅಚಂತ್ ಶರತ್ ಕಮಲ್, ಆಮಿತ್ ಪಂಗಲ್, ಗಗನ್ ನರಂಗ್, ರೋಹನ್ ಬೋಪಣ್ಣ, ಅಂಕಿತ ರೈನಾ, ಸಾಯಿ ಪ್ರಣೀತ್, ಶ್ರೀಹರಿ ನಟರಾಜ್, ಹರ್ಮೀತ್ ದೇಸಾಯಿ, ಅಭಿಷೇಕ್ ವರ್ಮ, ಅವಿನಾಶ್ ಸಾಬ್ಲೆ, ಕೆ. ಟಿ. ಇರ್ಫಾನ್, ಲೌಲ್ಲೀನಾ ಬೊರೊಗೈನ್, ಸಿಮರ್ಜೀತ್ ಕೌರ್, ಜೆರೆಮಿ, ಭವಾನಿ ದೇವಿ, ಪ್ರಮೋದ್ ಭಗತ್ ಮಮತಾ ಪೂಜಾರಿ, ಅಂಜು ಬಾಬಿ ಜಾರ್ಜ್ ಸೇರಿದಂತೆ ಬೇರೆ ಬೇರೆ ಕ್ರೀಡೆಗಳಲ್ಲಿ ಹೆಸರು ಮಾಡಿದ ಸುಮಾರು 49 ಜನರು ಭಾಗವಹಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.