ನವದೆಹಲಿ: ಕೊರೋನಾವೈರಸ್ ಮಹಾಮಾರಿಯ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ಸ್ಥಾಪನೆ ಮಾಡಲಾದ ಪಿಎಂ ಕೇರ್ಸ್ ನಿಧಿಗೆ ದೆಹಲಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ತಮ್ಮ ಎರಡು ವರ್ಷದ ವೇತನವನ್ನು ನೀಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್ ಅವರು, “ಜನರು ಕೇಳುತ್ತಾರೆ ಈ ದೇಶ ನಮಗಾಗಿ ಏನು ಮಾಡಿದೆ ಎಂದು. ಆದರೆ ನಿಜವಾದ ಪ್ರಶ್ನೆ ಎಂದರೆ ನಾವು ಈ ದೇಶಕ್ಕಾಗಿ ಏನು ಮಾಡುತ್ತಿದ್ದೇವೆ ಎಂಬುದು. ನಾನು ಪಿಎಂ ಕೇರ್ಸ್ ನಿಧಿಗೆ 2 ವರ್ಷಗಳ ವೇತನವನ್ನು ನೀಡಲು ಮುಂದಾಗಿದ್ದೇನೆ. ನೀವು ಮುಂದಾಗಿ” ಎಂದಿದ್ದಾರೆ.
People ask what can their country do for them. The real question is what can you do for your country?
I am donating my 2 year’s salary to #PMCaresFund. You should come forward too! @narendramodi @JPNadda @BJP4Delhi #IndiaFightsCorona
— Gautam Gambhir (@GautamGambhir) April 2, 2020
ಈ ಮೊದಲು ಕೊರೋನಾ ಹೋರಾಟಕ್ಕಾಗಿ MPLAD ನಿಧಿಯಿಂದ 1 ಕೋಟಿ ರೂ. ಗಳನ್ನು ನೀಡಿದ್ದರು.
ಭಾರತದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 1975ಕ್ಕೆ ತಲುಪಿದೆ. ಕಳೆದ 12 ಗಂಟೆಗಳಲ್ಲಿ 131 ಮಂದಿಗೆ ವೈರಸ್ ಇರುವುದು ಪತ್ತೆಯಾಗಿದೆ.
2011ರಲ್ಲಿ ಈ ದಿನ ಭಾರತ ತನ್ನ ಎರಡನೇ ವಿಶ್ವಕಪ್ ಅನ್ನು 28 ವರ್ಷಗಳ ಬಳಿಕ ಎತ್ತಿಹಿಡಿದಿತ್ತು. ಈ ಕ್ರೀಡಾಕೂಟದಲ್ಲಿ ಗಂಭೀರ್ ಅತ್ಯಂತ ಪ್ರಮುಖ ಪಾತ್ರವಹಿಸಿದ್ದರು. 1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತನ್ನ ಚೊಚ್ಚಲ ವಿಶ್ವಕಪ್ ಅನ್ನು ಎತ್ತಿ ಹಿಡಿದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.