ನವದೆಹಲಿ: ಕರೋನಾವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾತ್ಯತೀತರು ಎಂದು ಕರೆಸಿಕೊಳ್ಳುವ ಬುದ್ಧಿಜೀವಿಗಳು ದೇಗುಲಗಳ ಬದಲು ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು ಎಂಬ ಹೇಳಿಕೆಯನ್ನು ನೀಡುತ್ತಿದ್ದಾರೆ. ದೇಗುಲಗಳಿಗೆ ಪೂರೈಸಲಾಗುವ ಸಂಪನ್ಮೂಲಗಳು ವ್ಯರ್ಥ ಎಂದು ಬಿಂಬಿಸುವ ಪ್ರಯತ್ನಗಳು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಕೇವಲ ಆಸ್ಪತ್ರೆ ಮಾತ್ರ ಅಲ್ಲ ದೇಗುಲಗಳ ಬದಲು ಶಾಲೆಗಳನ್ನು ಕೂಡ ನಿರ್ಮಾಣ ಮಾಡಬೇಕು ಎಂಬ ದೊಡ್ಡಮಟ್ಟದ ಬೇಡಿಕೆಯನ್ನು ಇವರು ಹಿಂದಿನಿಂದಲೂ ಇಡುತ್ತಾ ಬಂದಿದ್ದಾರೆ.
ಹೆಚ್ಚಿನ ಪ್ರಮಾಣದಲ್ಲಿ ಆಸ್ಪತ್ರೆಗಳನ್ನು ಮತ್ತು ಶಾಲೆಗಳನ್ನು ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ನಿಜಕ್ಕೂ ಪ್ರಸಂಶನೀಯ. ಆದರೆ ದೇಗುಲಗಳನ್ನು ನಿರ್ಮಾಣ ಮಾಡಬಾರದು ಎಂಬ ಹೇಳಿಕೆಗಳು ಸಮಂಜಸವಲ್ಲ. ಯಾಕೆಂದರೆ ದೇಗುಲಗಳು, ಹಿಂದೂ ಸಂಘ-ಸಂಸ್ಥೆಗಳು ಅದೆಷ್ಟು ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ದೇಶ ಸಂಕಷ್ಟವನ್ನು ಎದುರಿಸುವ ಸಂದರ್ಭದಲ್ಲಿ ಮೊದಲು ದೇಣಿಗೆಗಳನ್ನು ನೀಡುವುದೇ ದೇಗುಲಗಳು. ಕೊರೋನವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಇದು ನಮಗೆ ಕಾಣಸಿಕ್ಕಿದೆ.
ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸ್ಥಾಪನೆ ಮಾಡಿರುವ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವಿಶ್ವವಿಖ್ಯಾತ ಕಂಚಿ ಮಠವು ತಲಾ 10 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ.
ಪಾಟ್ನಾದ ಮಹಾವೀರ ಮಂದಿರವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂಪಾಯಿಗಳನ್ನು ನೀಡಿದೆ. ಈ ಮಂದಿರವು ರಾಮಮಂದಿರ ನಿರ್ಮಾಣಕ್ಕೆ 10 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದೆ.
ಜಮ್ಮು-ಕಾಶ್ಮೀರದ ವಿಶ್ವವಿಖ್ಯಾತ ವೈಷ್ಣೋದೇವಿ ಮಂದಿರದ ಎಲ್ಲಾ ಸಿಬ್ಬಂದಿಗಳು ಕೂಡ ತಮ್ಮ ಒಂದು ದಿನದ ವೇತನವನ್ನು ರಾಜ್ಯ ಪರಿಹಾರ ನಿಧಿಗೆ ನೀಡಿದ್ದಾರೆ. ಈ ದೇವಸ್ಥಾನದ ಅಧಿಕಾರಿಗಳು ತಮ್ಮ ಎರಡು ದಿನದ ವೇತನವನ್ನು ನೀಡಿದ್ದಾರೆ. ಮಾತ್ರವಲ್ಲದೆ, 600 ಬೆಡ್ಗಳನ್ನು ನಿಯೋಜಿಸುವಷ್ಟು ಸಾಮರ್ಥ್ಯವುಳ್ಳ ತನ್ನ ಆಶಿರ್ವಾದ್ ಕಾಂಪ್ಲೆಕ್ಸ್ ಅನ್ನು ಜಿಲ್ಲಾಡಳಿತಕ್ಕೆ ಬಿಟ್ಟುಕೊಡಲು ನಿರ್ಧರಿಸಿದೆ.
ಛತ್ತೀಸ್ಗಡದ ಮಹಾಮಾಯ ಮಂದಿರ ಟ್ರಸ್ಟ್ ಐದು ಲಕ್ಷದ ಹನ್ನೊಂದು ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ಮಾತ್ರವಲ್ಲದೆ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ ಸಂಸ್ಥೆಗೆ ಒಂದು ಲಕ್ಷದ ಹನ್ನೊಂದು ಸಾವಿರ ರೂಪಾಯಿಗಳನ್ನು ಒದಗಿಸಿದೆ.
ಗುಜರಾತಿನ ಸೋಮನಾಥ ಮಂದಿರ ಟ್ರಸ್ಟ್ ಒಂದು ಕೋಟಿ ರೂಪಾಯಿಗಳನ್ನು ಗುಜರಾತ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ.
ಅಂಬಾಜಿ ಮಂದಿರ ಟ್ರಸ್ಟ್ ಒಂದು ಕೋಟಿ ರೂಪಾಯಿಗಳನ್ನು ಗುಜರಾತ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ಮಾತ್ರವಲ್ಲದೆ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಪೊಟ್ಟಣಗಳನ್ನು ಕೂಡ ಇದು ಒದಗಿಸುತ್ತಿದೆ.
ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ 51 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ಮಾತ್ರವಲ್ಲದೆ ಹಲವಾರು ನಿರ್ಗತಿಕರಿಗೆ ಇದು ಆಹಾರವನ್ನು ಕೂಡ ಇದು ಒದಗಿಸುತ್ತಿದೆ.
ಕೊಲ್ಹಾಪುರದ ದೇವಸ್ಥಾನ ಮ್ಯಾನೇಜ್ಮೆಂಟ್ ಕಮಿಟಿಯು ಎರಡು ಕೋಟಿ ರೂಪಾಯಿಗಳನ್ನು ಮಹಾಲಕ್ಷ್ಮೀ ದೇಗುಲದ ವತಿಯಿಂದ ನೀಡಿದೆ.
ಸ್ವಾಮಿನಾರಾಯಣ ದೇಗುಲ ಸಮಿತಿಯು 1.88 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಮಾತ್ರವಲ್ಲದೆ ನಿರ್ಗತಿಕರಿಗೆ ಆಹಾರವನ್ನು ಇದು ಒದಗಿಸುತ್ತದೆ. 500 ಕೊಠಡಿಗಳ ಕಟ್ಟಡಗಳನ್ನು ಐಸೋಲೇಷನ್ಗಾಗಿ ನೀಡಲು ಅದು ಮುಂದಾಗಿದೆ.
ಬಾಬಾ ರಾಮದೇವ್ ಅವರು ರೂ.25 ಕೋಟಿಗಳನ್ನು ಪ್ರಧಾನಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತುಪರಿಸ್ಥಿತಿ ಪರಿಹಾರ ನಿಧಿಗೆ ನೀಡಿದ್ದಾರೆ. ಮಾತ್ರವಲ್ಲದೆ ಪತಂಜಲಿ ಮತ್ತು ರುಚಿ ಸೋಯ ಉದ್ಯೋಗಿಗಳು ತಮ್ಮ ಒಂದು ದಿನದ ವೇತನವನ್ನು ಒಂದೂವರೆ ಕೋಟಿ ರೂಪಾಯಿಗಳನ್ನು ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ ನೀಡಲಿದ್ದಾರೆ.
ಹೀಗೆ ಇನ್ನಷ್ಟು ದೇಗುಲಗಳು ಮತ್ತು ಮಠ-ಮಂದಿರಗಳು, ಹಿಂದೂ ಧಾರ್ಮಿಕ ಮುಖಂಡರುಗಳು ತಮ್ಮ ಕೈಲಾದಷ್ಟು ಸಹಾಯವನ್ನು ಈ ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ನೀಡಿದ್ದಾರೆ. ಈ ಮೂಲಕ ಜನರಲ್ಲಿ ಕೇವಲ ಆಧ್ಯಾತ್ಮಿಕತೆಯನ್ನು ಮೂಡಿಸುವುದು ಮಾತ್ರವಲ್ಲ, ಕಠಿಣ ಪರಿಸ್ಥಿತಿಯಲ್ಲಿ ಕೈಹಿಡಿಯುವ ಕಾರ್ಯಗಳನ್ನು ದೇಗುಲಗಳು ಮಾಡುತ್ತವೆ ಎಂಬುದನ್ನು ಪ್ರತಿಬಿಂಬಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.