ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಪ್ರಾರಂಭಿಸಿದ ಪಿಎಂ ಕೇರ್ಸ್ ನಿಧಿಗೆ 925 ಕೋಟಿ ರೂ.ಗಳನ್ನು ನೀಡುವುದಾಗಿ ಎನ್ಟಿಪಿಸಿ, ಎನ್ಎಚ್ಪಿಸಿ, ಆರ್ಇಸಿ ಮತ್ತು ಇತರ ವಿದ್ಯುತ್ ಸಚಿವಾಲಯದ ಪಿಎಸ್ಯುಗಳು ಘೋಷಣೆ ಮಾಡಿವೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಅವರು ಈ ಬಗ್ಗೆ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ದೇಣಿಗೆಯ ಮೊದಲ ಭಾಗವನ್ನು ಮಾರ್ಚ್ 31 ರಂದು ನೀಡಲಾಗುವುದು ಮತ್ತು ಉಳಿದ ಮೊತ್ತವನ್ನು ಏಪ್ರಿಲ್ ಮೊದಲ ವಾರದಲ್ಲಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
PM CARES ನಿಧಿ ಅಥವಾ ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ ಎಂದು ಕರೆಯಲ್ಪಡುವ ಈ ಚಾರಿಟಬಲ್ ಟ್ರಸ್ಟ್ ಅನ್ನು ಕೇಂದ್ರವು ಮಾರ್ಚ್ 28 ರಂದು ಸ್ಥಾಪಿಸಿತು. ಪಿಎಂ ಮೋದಿ ಈ ಟ್ರಸ್ಟ್ನ ಅಧ್ಯಕ್ಷರಾಗಿದ್ದರೆ, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಇತರ ಸದಸ್ಯರು. ನಾವೆಲ್ ಕರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳನ್ನು ಹೆಚ್ಚಿಸಲು ವ್ಯಕ್ತಿಗಳು, ಕಾರ್ಪೊರೇಟ್ಗಳು ಮತ್ತು ಸಂಸ್ಥೆಗಳು ಸೇರಿದಂತೆ ಎಲ್ಲಾ ನಾಗರಿಕರು ಈ ನಿಧಿಗೆ ಕೊಡುಗೆ ನೀಡಬಹುದು.
ಇಲ್ಲಿಯವರೆಗೆ ಖ್ಯಾತ ವ್ಯಕ್ತಿಗಳಾದ ಅಕ್ಷಯ್ ಕುಮಾರ್, ವರುಣ್ ಧವನ್, ರಾಜ್ಕುಮಾರ ರಾವ್, ಭೂಮಿ ಪೆಡ್ನೇಕರ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಸಭ್ಯಸಾಚಿ ಮತ್ತು ಬಾದ್ ಶಾ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ಕೊಡುಗೆ ನೀಡಿದ್ದಾರೆ. ಇದಲ್ಲದೆ, ಅದಾನಿ ಫೌಂಡೇಶನ್ ಈ ಹೊಸ ನಿಧಿಗೆ ರೂ. 100 ಕೋಟಿ ಘೋಷಿಸಿದೆ. ಗೃಹ ಸಚಿವಾಲಯದ ಅಧಿಕಾರಿಗಳು ಒಂದು ದಿನದ ವೇತನವನ್ನು ನೀಡಲು ನಿರ್ಧರಿಸಿದ್ದರೆ, ಸುಪ್ರೀಂ ಕೋರ್ಟ್ನ ಸಿಬ್ಬಂದಿ ಮೂರು ದಿನಗಳ ವೇತನವನ್ನು ಪಿಎಂ ಕೇರ್ಸ್ ನಿಧಿಗೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.