ಚೆನ್ನೈ: ಮಧುರೈನ ಜವಳಿ ಅಂಗಡಿಯೊಂದರ ಮಾಲೀಕರೊಬ್ಬರು ಕೊರೋನವೈರಸ್ ಹಿನ್ನೆಲೆಯಲ್ಲಿ ಬಡ ಜನರು, ಪೊಲೀಸರು, ಕಾರ್ಪೋರೇಷನ್ ಮತ್ತು ಆರೋಗ್ಯ ಕಾರ್ಯಕರ್ತರಿಗೆ 8,000 ಹತ್ತಿ ಮುಖಗವಸುಗಳನ್ನು ತಯಾರಿಸಿ ವಿತರಿಸಿದ್ದಾರೆ.
ಮಧುರೈನ ನಾಡರಾಜ್ ನಗರದಲ್ಲಿರುವ ಅಂಗಡಿಯ ಮಾಲೀಕರಾದ ಸತೀಶ್ ಕುಮಾರ್ ಅವರು ಹತ್ತಿ ಕಚ್ಚಾ ವಸ್ತುಗಳಿಂದ ಮುಖಗವಸುಗಳನ್ನು ತಯಾರಿಸಿದ್ದಾರೆ. ಅಲ್ಲದೇ, ಇವರು ಮುಖಗವಸುಗಳನ್ನು ತಯಾರಿಸುವ ಕಾರ್ಯವನ್ನು ಮುಂದುವರಿಸುವುದಕ್ಕಾಗಿ ಹತ್ತಿ ಬಟ್ಟೆಗಳನ್ನು ನೀಡುವಂತೆ ಜನರನ್ನು ವಿನಂತಿಸುತ್ತಿದ್ದಾರೆ.
“ನಾನು ಮುಖಗವಸುಗಳನ್ನು ತಯಾರಿಸುವುದನ್ನು ಮುಂದುವರೆಸಲು ಜನರು ನನಗೆ ಹತ್ತಿ ಬಟ್ಟೆಗಳನ್ನು ದಾನ ಮಾಡುವಂತೆ ವಿನಂತಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು , ಭಾರತದಲ್ಲಿ ಒಟ್ಟು 1024 COVID-19 ಪ್ರಕರಣಗಳು ಮತ್ತು ಮಾರಕ ವೈರಸ್ನಿಂದ 27 ಸಾವುಗಳು ಸಂಭವಿಸಿದೆ ಎಂದು ಮಾಹಿತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.