ನವದೆಹಲಿ: ವಿಶ್ವವು COVID-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸೋಂಕಿನ ಹರಡುವಿಕೆಯ ಭೀತಿಯನ್ನು ತಡೆಗಟ್ಟಲು ಕೈಗೊಂಡ ಉಪಕ್ರಮಗಳನ್ನು ವಿಶ್ವದಾದ್ಯಂತ ಅನೇಕ ವಿಶ್ಲೇಷಕರು ಮತ್ತು ಹೋರಾಟಗಾರರು ಶ್ಲಾಘಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ಥಾನದ ಪಿಓಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಅವರು, ಮೋದಿಯವರ 21 ದಿನಗಳ ಲಾಕ್ಡೌನ್ ಅನ್ನು ಶ್ಲಾಘಿಸಿದ್ದಾರೆ. ಅಲ್ಲದೇ, ಪಾಕಿಸ್ಥಾನ ಮತ್ತು ಪಾಕಿಸ್ಥಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಗಿಲ್ಗಿಟ್ ಬಲ್ಟಿಸ್ತಾನದ ಪರಿಸ್ಥಿತಿ ಹದಗೆಡುತ್ತಿದೆ ಏಕೆಂದರೆ ಜನರು ಸಾಮಾಜಿಕ ದೂರ ಮತ್ತು ನಿಯಮಗಳನ್ನು ಅನುಸರಿಸುತ್ತಿಲ್ಲ. ಅಲ್ಲಿ ಸಂಪೂರ್ಣ ಲಾಕ್ಡೌನ್ ನಡೆಸಲಾಗುತ್ತಿಲ್ಲ ಎಂದಿದ್ದಾರೆ.
“ನಾಯಕತ್ವದ ಕೊರತೆ ಮತ್ತು ರಾಷ್ಟ್ರೀಯ ಕ್ರಿಯಾ ಯೋಜನೆಯ ಕೊರತೆಯಿಂದಾಗಿ ಪಾಕಿಸ್ಥಾನದ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ. ಕೊರೋನವೈರಸ್ ರೋಗಿಗಳನ್ನು ಪ್ರತ್ಯೇಕತೆಗಾಗಿ ಪಿಒಕೆಗೆ ಕಳುಹಿಸಲಾಗುತ್ತಿದೆ, ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಏಕೆಂದರೆ ಇದು ಆಕ್ರಮಿತ ಪ್ರದೇಶದಲ್ಲಿ ವೈರಸ್ ಹರಡುವುದನ್ನು ವೇಗಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ.
ವಾಷಿಂಗ್ಟನ್ ಮೂಲದ ಗಿಲ್ಗಿಟ್ ಬಲ್ತಿಸ್ತಾನದ ರಾಜಕೀಯ ಕಾರ್ಯಕರ್ತ ಸೆಂಗೆ ಹೆಚ್. ಸೆರಿಂಗ್ ಅವರು ಮಾತನಾಡಿ, “ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ನಾಯಕರಾದ ಭಾರತದ ಪ್ರಧಾನಿ ಮೋದಿ ಅವರು ನಿರೀಕ್ಷೆಯಂತೆ ರಚನಾತ್ಮಕ ಮತ್ತು ಬೆಂಬಲದ ಪಾತ್ರವನ್ನು ವಹಿಸುತ್ತಿದ್ದಾರೆ. ಅವರ ನೀತಿಯನ್ನು ಅನುಸರಿಸುವುದರಿಂದ ಯಾವುದೇ ನಾಗರಿಕರು ಹಿಂದೆ ಉಳಿದಿಲ್ಲ. ಅವರ ಲಾಕ್ಡೌನ್ ನಿರ್ದೇಶನವನ್ನು ವಿರೋಧ ಪಕ್ಷಗಳು ಕೂಡ ಬೆಂಬಲಿಸಿದ್ದು, ಇದರಿಂದ ಅವರ ನಿರ್ಧಾರಕ್ಕೆ ಮಾನ್ಯತೆ ದೊರೆತಿದೆ” ಎಂದಿದ್ದಾರೆ.
ಪಾಕಿಸ್ಥಾನದಲ್ಲಿ ಭಾನುವಾರ ಕೊರೊನಾವೈರಸ್ ಪ್ರಕರಣಗಳು ಪಂಜಾಬ್ನಲ್ಲಿ 570, ಸಿಂಧ್ನಲ್ಲಿ 469, ಖೈಬರ್ ಪಖ್ತುನ್ಖ್ವಾದಲ್ಲಿ 188, ಬಲೂಚಿಸ್ತಾನದಲ್ಲಿ 138, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) / ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ 118 ಮತ್ತು ಇಸ್ಲಾಮಾಬಾದ್ನಲ್ಲಿ 43 ದಾಖಲಾಗಿವೆ ಮತ್ತು 11 ಸಾವುಗಳು ಸಂಭವಿಸಿವೆ. ಮಾರಕ ವೈರಲ್ ಸೋಂಕಿನ ಹೊಸ ಕೇಂದ್ರಬಿಂದುವಾಗಿ ಪಂಜಾಬ್ ಪ್ರಾಂತ್ಯ ಹೊರಹೊಮ್ಮಿದೆ.
ಮೋದಿಯವರ ಕಠಿಣ ಕ್ರಮವನ್ನು ವಿಶ್ವದಾದ್ಯಂತ ಹಲವರು ಶ್ಲಾಘಿಸಿದ್ದಾರೆ. ಅಮೆರಿಕದ ಇಂಟರ್ನೆಟ್ ಉದ್ಯಮಿ ಮಾರ್ಕ್ ಬೆನಿಯೋಫ್, “ಭಾರತದ ಪ್ರಧಾನ ಮಂತ್ರಿ ದೇಶದ ಎಲ್ಲಾ 1.3 ಬಿಲಿಯನ್ ಜನರನ್ನು ಬುಧವಾರದಿಂದ 3 ವಾರಗಳವರೆಗೆ ತಮ್ಮ ಮನೆಗಳ ಒಳಗೆ ಇರಲು ಆದೇಶಿಸಿದ್ದಾರೆ – ಕೊರೊನಾವೈರಸ್ ಹರಡುವುದನ್ನು ತಡೆಯಲು ಇದು ಕೈಗೊಂಡ ಅತಿದೊಡ್ಡ ಮತ್ತು ಅತ್ಯಂತ ಕಠಿಣ ಕ್ರಮ. ಯುಎಸ್ನಲ್ಲೂ ಇದು ಅಗತ್ಯವಿದೆ ” ಎಂದಿದ್ದಾರೆ.
ಯುಎಸ್ ಮೂಲದ ಯೋಗ ಗುರು ಡಾ. ಡೇವಿಡ್ ಫ್ರಾಲಿ, “ಇಪ್ಪತ್ತೊಂದು ದಿನಗಳ ಕಾಲ ರಾಷ್ಟ್ರೀಯ ಲಾಕ್ಡೌನ್ ಹೊಂದಿರುವ ಭಾರತವು ಯುನೈಟೆಡ್ ಸ್ಟೇಟ್ಸ್ಗಿಂತ ಬಹಳ ಮುಂದಿದೆ. ಜಗತ್ತು ಮೆಚ್ಚಲೇಬೇಕು ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ಸಹಾನುಭೂತಿಯನ್ನು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.