ನವದೆಹಲಿ: COVID-19 ರ ವಿರುದ್ಧ ಹೋರಾಡುವ ಪ್ರಯತ್ನಗಳಿಗೆ MPLAD ನಿಧಿಯಿಂದ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕೊಡುಗೆಯಾಗಿ ನೀಡಲು ಒಪ್ಪಿಗೆ ಪತ್ರಗಳನ್ನು ಕಳುಹಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸದರಿಗೆ ಮನವಿ ಮಾಡಿದ ಒಂದು ದಿನದ ನಂತರ, 35 ಸಂಸದರು ಈಗಾಗಲೇ ಈ ಕಾರ್ಯವನ್ನು ಮಾಡಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಮೂಲಗಳು ತಿಳಿಸಿವೆ.
ತಮ್ಮ ನೆರವಿನ ವಾಗ್ದಾನ ಮಾಡಿದವರಲ್ಲಿ ಲೋಕಸಭೆಯ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಸೇರಿದ್ದಾರೆ.
1 ಕೋಟಿ ರೂ.ಗೆ ಒಪ್ಪಿಗೆ ಪತ್ರಗಳಿಗೆ ಸಂಬಂಧಿಸಿದಂತೆ ಇಮೇಲ್ ಕಳುಹಿಸಿದವರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಖಾತೆ ಸಚಿವ ಜನರಲ್ ವಿ.ಕೆ.ಸಿಂಗ್, ಸಂಸದರಾದ ಪಶುಪತಿ ಕುಮಾರ್ ಪರಾಸ್, ರಮೇಶ್ ಬಿಧುರಿ, ಜಮ್ಯಾಂಗ್ ತ್ಸೆರಿಂಗ್ ನಮ್ಯಾಗ್ಯಾಲ್, ದಿಯಾ ಕುಮಾರಿ, ಮೀನಾಕ್ಷಿ ಲೇಖಿ, ಪ್ರಿನ್ಸ್ ರಾಜ್, ಪ್ರಲ್ಹಾದ್ ಜೋಶಿ, ಸದಾನಂದ ಗೌಡ, ಗೌತಮ್ ಗಂಭೀರ್, ಪ್ರೀನೀತ್ ಕೌರ್, ಎ ರಾಜಾ, ಸುಮಲತಾ ಅಂಬರೀಶ್ ಮತ್ತು ಗೋಪಾಲ್ ಶೆಟ್ಟಿ ಸೇರಿದಂತೆ ಹಲವು ಸಂಸದರು ತಮ್ಮ ನಿಧಿಯಿಂದ ಹಣವನ್ನು ಒಪ್ಪಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕೊರೋನಾವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಕಳೆದ ಮಂಗಳವಾರ ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿತು.
ಸಂಸದರು ತಮ್ಮ ಎಂಪಿಎಲ್ಎಡಿ (ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ) ನಿಧಿಯಿಂದ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬಳಸಿಕೊಳ್ಳುವ ಸಲುವಾಗಿ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯಕ್ಕೆ ಒಪ್ಪಿಗೆ ಪತ್ರಗಳನ್ನು ರವಾನಿಸಬೇಕೆಂದು ಸ್ಪೀಕರ್ ಶನಿವಾರ ಒತ್ತಾಯಿಸಿದ್ದರು.
ಸಂಸದರು ಮಾಡಿದೆ ಕಾರ್ಯಕ್ಕೆ ಸ್ಪೀಕರ್ ಧನ್ಯವಾದ ಅರ್ಪಿಸಿದರು. ಕೊರೋನಾವೈರಸ್ ವಿರುದ್ಧದ ಯುದ್ಧದಲ್ಲಿ ದೇಶವು ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.